ನಗರದಲ್ಲಿ ಪೊಲೀಸ್ ಆಯುಕ್ತಾಲಯದಿಂದ ಸೈಬರ್ ಕೈಂ ಕುರಿತು 1930 ಸಹಾಯವಾಣಿಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು. ಈ ಅಭಿಯಾನಕ್ಕೆ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಚಾಲನೆ ನೀಡಿದರು
ಹಲವಾರು ಜನರಿಗೆ ಸೈಬರ್ ಅಪರಾಧದ ಸಹಾಯವಾಣಿ ಮಾಹಿತಿ ಗೊತ್ತಿಲ್ಲ. ಬೆಳಗಾವಿಯಲ್ಲಿ ಜನರು ಸೈಬರ್ ಅಪರಾಧಗಳಿಗೆ ಒಳಗಾಗಿದ್ದಾರೆ. ಮೊದಲೆಲ್ಲ ಮೊಬೈಲ್ ಬಳಕೆ ಕಡಿಮೆ ಇತ್ತು. ಹೀಗಾಗಿ ಸೈಬರ್ ಕೈಂ ಇರಲಿಲ್ಲ. ಈಗ ಸೈಬರ್ ಕೈಂ ಸಂಖ್ಯೆ ಹೆಚ್ಚಾಗಿದೆ. ಈ ಕುರಲು ರಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಬೆಳಗಾವಿ ಪೊಲೀಸ್ ಇಲಾಖೆಯಿಂದ ಪ್ರೊಜೆಕ್ಟ್ ಸೈಬರ್ ಕೈಂ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಮುಖ ಸ್ಥಳಗಳಲ್ಲಿ 70 ಪ್ಲೆಕ್ಸ್ಗಳನ್ನು ಅಳವಡಿಸಲಾಗುತ್ತಿದೆ. ಎರಡನೆಯ ಹಂತದಲ್ಲಿ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಾರ್ಯಾಲಯಗಳಲ್ಲಿಯೂ ಜಾಗೃತಿ ಮೂಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.
ಈ ವೇಳೆ ಕೈಂ ಎಸಿಪಿ ರಘು, ಸಿಪಿಐ ಬಿ.ಆರ್.ಗಡ್ಡಕರ ಸೇರಿ ಇನ್ನುಳಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.