ವಿಜಯಪುರ

ಬಿ ಎಸ್ ವೈ ವಚನಾನಂದ ಶ್ರೀ ಗೆ 10 ಕೋಟಿ ಕೊಟ್ಟಿದ್ದಾರೆ : ಯತ್ನಾಳ ಹೊಸ ಬಾಂಬ್ 

ವಿಜಯಪುರ: ವಚನಾನಂದ ಶ್ರೀ ಅವರು  ಒಬ್ಬ ಬ್ರೋಕರ್ ಸ್ವಾಮಿ ಎಂದು ಹರಿಹರ ವಚನಾನಂದಶ್ರೀ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ ಹರಿಹರ ವಚನಾನಂದಶ್ರೀಅನ್ನು ಬ್ರೋಕರ್ ಸ್ವಾಮಿ ಎಂದು ಹೊಸ ಬಾಂಬ್ ಸಿಡಿಸಿದರು. ಮಂತ್ರಿಗಿರಿ ಮಾಡಲು ಹರಿಹರ ಶ್ರೀ 10 ಕೋಟಿ ವಸೂಲಿ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ವೈ ಕಡೆಗೆ ಹರಿಹರ ಶ್ರೀ 10 ಕೋಟಿ ತೆಗೆದುಕೊಂಡಿದ್ದಾರೆ. ಅಲ್ಲದೇ, ಮಠದಲ್ಲಿ ಅವ್ಯವಹಾರ ಮಾಡಿದ್ದಾನೆ. ಅದನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಹರಿಹರಶ್ರೀಗಳ ಬಣ್ಣ ಬಯಲು ಮಾಡುತ್ತೇನೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
TV24 News Desk
the authorTV24 News Desk

Leave a Reply