ಬೆಳಗಾವಿಬೆಳಗಾವಿ ನಗರ

 ಕೊನೆ ಉಸಿರನವರೆಗೆ ನಾನು ಜನ ಸೇವೆಗಾಗಿ ಸಿದ್ದ  : ಹೆಬ್ಬಾಳಕರ 

ಬೆಳಗಾವಿ: ಮಾವಿನಕಟ್ಟಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಅರಿಸಿಣ ಕುಂಕುಮ ಕಾರ್ಯಕ್ರಮದಲ್ಲಿಂದು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಭಾಗಿಯಾಗಿದರು , ಗ್ರಾಮಸ್ಥರ‌ ಕುಶಲೋಪರಿ‌ ವಿಚಾರಿಸಿ, ಕಳೆದ ನಾಲ್ಕೂವರೆ ವರ್ಷಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ‌ ಕುರಿತು ಮಾತನಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಕ್ಷೇತ್ರದಲ್ಲಿ ಎಲ್ಲಿ ಹೋದರು ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ದೊರಕುತ್ತಿದೆ.‌ ಕಿರಿಯರಿಂದ ಹಿಡಿದು ಹಿರಿಯರೆಲ್ಲರೂ ಸೇರಿ ನನಗೆ ಅಭೂತಪೂರ್ವ ಬೆಂಬಲ‌ ನೀಡಿದ್ದಿರಿ. ನಿಮ್ಮೆಲ್ಲರಿಗೂ ನಾನು ಸದಾಕಾಲವೂ ಚಿರೃಣಿ ಎಂದರು. ನನ್ನ ಜೀವ ಇರುವವರೆಗೂ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶವನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಉಳವಪ್ಪ ಮಲಣ್ಣವರ, ಸಿದ್ರಾಮ್ ಗಡಾದ, ಶಂಕರಗೌಡ ಪಾಟೀಲ, ಚನ್ನಪ್ಪ ಹಿರೇಹೊಳಿ, ಧರಿಗೌಡ ಪಾಟೀಲ ಕಾಕಾ, ನಾಗರಾಜ ಅರಗಂಜಿ, ಕಲ್ಲವ್ವ ಹಿರೇಹೊಳಿ, ಕಸ್ತೂರಿ ಮಲ್ಲಣ್ಣವರ, ಆಪ್ತ ಸಹಾಯಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply