ಜಿಲ್ಲೆಬೆಳಗಾವಿ

ಮಳೆ ತಂದ ರಗಳೆ ನಾಳೆಯೂ ಶಾಲೆಗೆ ರಜೆ ಮಕ್ಕಳೇ!

ಬೆಳಗಾವಿ:

ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರಂತರ ಮಳೆ ಮುಂದುವರೆದ ಪರಿಣಾಮವಾಗಿ ನಾಳೆಯೂ ಸಹ ಬೆಳಗಾವಿ ನಗರ ಗ್ರಾಮೀಣ ಹಾಗೂ ಕಿತ್ತೂರು ಖಾನಾಪುರ ತಾಲೂಕಿನ ಅಂಗನವಾಡಿ ಮಕ್ಕಳಿಂದ ಹಿಡಿದು ಪಿಯು ಕಾಲೇಜು ಮಕ್ಕಳ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ನಿರಂತರ ಮಳೆಯಿಂದಾಗಿ ಕಿತ್ತೂರು ಖಾನಾಪುರ, ಹಾಗೂ ಬೆಳಗಾವಿ ನಗರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಣೆ ಮಾಡುವಂತೆ ಡಿಸಿ‌ ಮೊಹಮ್ಮದ್ ರೋಷನ್ ಅವರಿಗೆ ಮನವಿ ಮಾಡಿಕೊಂಡ ಬೆನ್ನಲ್ಲೆ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗದಿರಲಿ ಎಂದು ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ನಾಳೆಯೂ ಸಹ ಶಾಲಾ ಕಾಲೇಜುಗಳಿಗೆ ರಜೆ ಮುಂದುವರೆಸಿದೆ.

TV24 News Desk
the authorTV24 News Desk

Leave a Reply