ಬೆಳಗಾವಿ: ವಿದ್ಯಾ ನಗರದಲ್ಲಿರುವ ಲಖನ್ ಜಾರಕಿಹೋಳಿ ಮನೆಗೆ ಏಕಾಏಕಿ ಸ್ವಾಮೀಜಿಗಳು ಭೇಟಿ ನೀಡಿ ಕುತೂಹಲ ಕೆರಳಿಸಿದರು.
ರಾಜ್ಯದಲ್ಲಿ ಎಸ್ಸಿ- ಎಸ್ಟಿ ಸಮುದಾಯ ಒಗ್ಗೂಡಿಸಲು ಅಖಾಡಕ್ಕಿದಿರುವ ಸ್ವಾಮೀಜಿಗಳು ಪಂಚಮಸಾಲಿ ಒಕ್ಕಲಿಗರ ನಂತರ ಎಸ್ಸಿ- ಎಸ್ಟಿ ಸ್ವಾಮೀಜಿಗಳಿಂದ ಸಭೆ ಆಯೋಜಿಲಾಗಿತ್ತು. ಈ ಸಭೆಯ ಉದ್ದೇಶ ಎಸ್ಸಿ- ಎಸ್ಟಿ ಅಭ್ಯರ್ಥಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಸಭೆಯ ನಂತರ ವಿದ್ಯಾ ನಗರದಲ್ಲಿರುವ ಲಖನ್ ಜಾರಕಿಹೋಳಿ ಮನೆಗೆ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು,ಚಿತ್ರದುರ್ಗದ ಚಲವಾದಿ ಪೀಠದ ಬಸವ ನಾಗೀದೇವ ಸ್ವಾಮೀಜಿ,ಚಿತ್ರದುರ್ಗದ ಲಂಬಾಣಿ ಬಂಜಾರ ಪೀಠದ ಸೇವಾಲಾಲ್ ಸ್ವಾಮೀಜಿ, ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ,ಚಿತ್ರದುರ್ಗ ಮಾದಾರ ಚೆನ್ನಯ್ಯ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಸ್ವಾಮೀಜಿಗಳು ಭೇಟಿ ನೀಡಿ ಸುದೀರ್ಘ ಚರ್ಚೆ ಗೌಪ್ಯ ಚರ್ಚೆ ನಡೆಸಿದರು. ಚರ್ಚೆ ಯಾವ ವಿಷಯದ ಬಗ್ಗೆ ನಡೆದಿದೆ ಇನ್ನು ತಿಳಿದು ಬಂದಿಲ್ಲ ಆದರೂ ಏಕಾಏಕಿ ಸ್ವಾಮೀಜಿಗಳು ಭೇಟಿ ನೀಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.