ದೆಹಲಿ: ಝಳಪಿಸುತ್ತಿರುವ ಕತ್ತಿಯನ್ನು ಹಿಡಿದುಕೊಂಡು ಇಬ್ಬರು ವ್ಯಕ್ತಿಗಳು ಆರೋಪಿ ಅಫ್ತಾಬ್ ಪ್ರಯಾಣಿಸುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ ನಡೆಸಿದ ಘಟನೆ ತನ್ನ ಸಂಗಾತಿ ಶ್ರದ್ಧಾ ವಾಕರ್ನನ್ನುಕೊಚ್ಚಿ ಕೊಂದ ಆರೋಪ ಹೊತ್ತಿರುವ ಅಫ್ತಾಬ್ ಪೂನಾವಾಲಾ ಅವನನ್ನು ಹೊತ್ತೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ರಾಷ್ಟ್ರ ರಾಜಧಾನಿಯಲ್ಲಿ ದಾಳಿ ನಡೆದಿದೆ.
ಹಿಂದೂ ಸೇನೆಯ ಕಾರ್ಯಕ್ರತರೆಂದು ಹೇಳಿಕೊಂಡು ಇಬ್ಬರು ವ್ಯಕ್ತಿಗಳು ಪೊಲೀಸ್ ವ್ಯಾನ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿಕೋರರಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾದ್ಯಮಗಳೊಂದಿದೆ ಪ್ರತಿಕ್ರಿಯಿಸಿದ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅಫ್ತಾಬ್ ಪೂನಾವಾಲಾ ಪ್ರಯಾಣಿಸುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದವರು ಹಿಂದೂ ಸೇನಾ ಸಂಘಟನೆಯ ಸದಸ್ಯರು ಎಂದು ಪೊಲೀಸರು ಮತ್ತು ಮಾಧ್ಯಮ ವರದಿಗಳ ಮೂಲಕ ತಿಳಿದು ಬಂದಿದೆ
“ಅವರು ನಮ್ಮ ಕಾರ್ಯಕ್ರತರಾಗಿರಬಹುದು ಆದರೆ ಅವರು ಮಾಡಿದ್ದು ಅವರ ವೈಯಕ್ತಿಕ ವಿಚಾರ ಹೊರತು ಹಿಂದೂ ಸೇನೆಯದ್ದಲ್ಲ” ಎಂದು ಗುಪ್ತಾ ಸ್ಪಷ್ಟ ಪಡಿಸಿದ್ದಾರೆ.