Uncategorized

ಪ್ರಚೋತದನಕಾರಿ ಪೋಸ್ಟ್ ಹಾಕಿದ್ದ ಕಾಂಗ್ರೇಸ್ ಮುಖಂಡನ ಮೇಲೆ ಕೇಸ್ ಹಾಕಿದ ಪೊಲೀಸರು

ಬೆಳಗಾವಿ:

ಔರಂಗಜೇಬ ಹಾಗೂ ಟಿಪ್ಪು ಫೋಟೊ ಹಾಕಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಬೆಳಗಾವಿಯ ಕಾಂಗ್ರೇಸ್ ಮುಖಂಡನ ಮೇಲೆ ಕೇಸ್ ಬಿದ್ದಿದೆ. ಅಶ್ವತ್ಥಾಮ ಮಂದಿರಕ್ಕೆ ಕಲ್ಲು ಹೊಡೆದ ಪ್ರಕರಣದ ನಂತರ ಪೊಲೀಸರು ಅಲರ್ಟ್ ಆಗಿದ್ದಾರೆ.ಯುತ್ ಕಾಂಗ್ರೇಸ್ ಮುಖಂಡ ಮುಜಮಿಲ್ ಅತ್ತಾರ(32) ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿ ಮುಜಮಿಲ್ ಬೆಳಗಾವಿಯ ಆಜಾಧ್ ನಗರದ ನಿವಾಸಿಯಾಗಿದ್ದು ಕಾಂಗ್ರೇಸ್ ಮುಖಂಡ ತನ್ನ ಇನ್ಸಟಾಗ್ರಾಮ್ ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ. ಔರಂಗಜೇಬ, ಟಿಪ್ಪು,ಫೋಟೊ ಹಾಕಿ ಬಾಪ್ ಹೈ ತುಮಾರೇ ಬೂಲ್ನಾಮತ್ ಅಂತಾ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದ. ಈ ಫೋಟೊಗೆ ಹಿಂದಿ ಅಗ್ನಿ ಪತ್ ಚಿತ್ರದ ಜ್ವಾಲಾಸಿ ಚಲತಿ ಹೇ ಅನ್ನೋ ಹಾಡಿನ ತುಣುಕು ಹಾಕಿದ್ದ ಪ್ರಚೋದನಕಾರಿ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಇನ್ನು ಕೇಸ್ ದಾಖಲಾಗುತ್ತಿದ್ದಂತೆ ಪೋಸ್ಟ್ ಆರೋಪಿ ಡಿಲಿಟ್ ಮಾಡಿದ್ದ ಸಧ್ಯ ಮುಖಂಡನ ವಿರುದ್ಧ ಮಾರ್ಕೇಟ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.

TV24 News Desk
the authorTV24 News Desk

Leave a Reply