ಬೆಳಗಾವಿ: ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು, ಚಕ್ರವರ್ತಿ ಸೂಲಿಬೆಲೆ ನೂರಕ್ಕೆ ಸಾವಿರಷ್ಟು ಸುಳ್ಳು ಹೇಳುವುದರಲ್ಲಿ ಪರಿಣಿತಿ ಪಡೆದವರು, ಇಂತವರ ಜೊತೆ ಚರ್ಚೆ ಮಾಡುವುದು ಬೇಡ ಎಂಬ ಕುರಿತು ನಮ್ಮ ಕಾರ್ಯಕರ್ತರು ಹಾಗೂ ನಮ್ಮದು ಅಭಿಪ್ರಾಯವಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಅರ್ಧ ಸತ್ಯ ಅರ್ಧ ಸುಳ್ಳು ಹೇಳುವವರ ವಿರುದ್ಧ ಚರ್ಚೆ ಮಾಡಬಹುದು. ಆದರೆ, ಚಕ್ರವರ್ತಿ ಸೂಲಿಬೆಲೆ ರಾಜ್ಯದಲ್ಲಿ ಸುಳ್ಳಿನ ವಿಶ್ವವಿದ್ಯಾಲಯದ ಉಪಕುಲಪತಿ , ಇಂತವರ ಜತೆ ಚರ್ಚೆ ಮಾಡುವುದರಲ್ಲಿ ಹುರುಳಿಲ್ಲ” ಎಂದು ಸತೀಶ ಜಾರಕಿಹೊಳಿ ಅವರು ವ್ಯಂಗ್ಯವಾಡಿದರು.
ಸುಳ್ಳು ಹೇಳುವುದರಲ್ಲಿ ಸೂಲಿಬೆಲೆ ನಿಸ್ಸಿಮ ಚಕ್ರವರ್ತಿ ಸೂಲಿಬೆಲೆ ಸವಾಲಿಗೆ ನಾನು ಸಿದ್ದನಿದ್ದು, ಹಿಂದೂ ಪದ ಎಲ್ಲಿಂದ ಹೇಗೆ ಬಂತು ಎಂಬುವುದು ಚರ್ಚೆ ನಡೆಯಲಿ, ಈ ವಿಷಯ ಚರ್ಚೆ ಕುರಿತು ಅರಿತುಕೊಳ್ಳುವ ಕಾತುರ ನನ್ನಗೂ ಇದೆ. ಆದರೆ, ಈ ಸುಳ್ಳಿನ ಸರದಾರ ಜೊತೆ ಚರ್ಚೆ ಮಾಡುವುದು ಎಷ್ಟು ಸರಿ ಎಂಬುವುದು ನಮಗೆ ಗೊತ್ತಿದೆ ಎಂದು ಸೂಲೆಬೆಲೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಎಂದು ಹೇಳಿದರು.
ಸೂಲಿಬೆಲೆ ಅವರು 10 ವರ್ಷಗಳ ಹಿಂದೆ ಹೇಳಿರುವ ಹೇಳಿಕೆಯನ್ನು ನಾವು ಕೂಡ ಪರಿಶೀಲನೆ ಮಾಡುತ್ತಿದ್ದೇವೆ. ಚಿನ್ನದ ರಸ್ತೆ ಎಲ್ಲಿದೇ ಎಂಬುವುದನ್ನು ಹುಡುಕಬೇಕಿದೆ. ಬೆಂಗಳೂರುನಿಂದ ಮಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಊಟಕ್ಕೆ ಬೆಂಗಳೂರು ಬರಬೇಕು. ಡಾಲರ್ ಹಾಗೂ ಆಸ್ಪತ್ರೆಗಳನ್ನು ಲ್ಯಾಪ್ ಟಾಪ್ ನಲ್ಲಿ ಹುಡುಕಿ ರೋಗಿಯ ಸ್ಥಿತಿಗತಿಯನ್ನು ನೋಡುವುದನ್ನು ಎಲ್ಲಿ ಮಾಡಿದ್ದಾರೆ ಎಂಬುವುದು ನೋಡಬೇಕಿದೆ. ಅವರು ಹೇಳಿದರಲ್ಲಿ ಯಾವುದಾರೂ ಒಂದು ಸತ್ಯವಿದ್ದರೂ ನಾನು ಚರ್ಚೆಗಿಳಿಯಲು ಸಿದ್ದ ಎಂದು ಸವಾಲೆಸೆದರು.
ವಿಜಯಪುರದಲ್ಲಿ ನಿಮ್ಮದು ಸಮಾವೇಶ ಮಾಡುತ್ತಿರಿ ಎಂಬ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯಪುರದಲ್ಲಿ ಸಮಾವೇಶ ಮಾಡಬೇಕೆಂಬ ಸನ್ನಿವೇಶ ನಮ್ಮಗಿಲ್ಲ, ನಮದೇಯಾದಂತಹ ವೇದಿಕೆಗಳು ಸಾಕಷ್ಟಿವೆ. ಗೋಕಾಕ ಹಾಗೂ ವಿಜಯಪುರದಲ್ಲಿ ನಿಂತು ವಿರೋಧಿಗಳಿಗೆ ತಕ್ಕ ಉತ್ತರ ಎಲ್ಲಿ ಬೇಕಾದರೂ ನಿಂತೂ ಹೇಳಿದರು ಅವರಿಗೆ ತಟ್ಟುತ್ತದೆ ಎಂದು ಸತೀಶ ಜಾರಕಿಹೊಳಿ ಅವರು ಹೇಳಿದರು.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದಲೇ ಅಭ್ಯರ್ಥಿಯಾಗಿ ಪುನಃ ಕಣಕ್ಕಿಳಿಯುತ್ತೇನೆ . ಆದ್ದರಿಂದ ಪಕ್ಷ ಸಂಘಟನೆಗಾಗಿ ನಾನು ಸದಾ ಸಿದ್ಧನಿದ್ದೇನೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದರು.