ಬೆಳಗಾವಿ

ಸಂಸಾರ ಬೇಸತ್ತು 2 ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ 

ಸವದತ್ತಿ: ಕುಟುಂಬ ತಾಪತ್ರೆಗಳಿಂದ ಬೇಸರಗೊಂಡ  ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನವಿಲುತೀರ್ಥ ಜಲಾಶಯಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸವದತ್ತಿ ಪೊಲೀಸ್ ಠಾಣೆಯ ವಟ್ನಾಳ ಗ್ರಾಮದ ಬಳಿ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮೂವರ ಶವ ಪತ್ತೆಯಾಗಿದ್ದು ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಶಶಿಕಲಾ ಅಲಿಯಾಸ್  ತನುಜಾ ಗಂಡ ಪರಸಪ್ಪ ಗೋಡಿ ( 32 ವರ್ಷ) ಮಕ್ಕಳಾದ  ಸುದೀಪ್ (4)  ರಾಧಿಕಾ ( 3)  ವರ್ಷದ ಮಗಳು ರಾಧಿಕಾ ಕರೆದುಕೊಂಡು ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಬಿದ್ದು,  ಸತ್ತಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.ಈಗಾಗಲೇ ಅಗ್ನಿ ಶಾಮಕ ದಳದವರ ಸಹಾಯದಿಂದ ಮೂರು ಶವಗಳನ್ನು ನದಿಯಿಂದ ಹೊರತೆಗೆದಿದ್ದು, ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಸಂಜೀವ ಪಾಟೀಲ ತಿಳಿಸಿದ್ದಾರೆ.
TV24 News Desk
the authorTV24 News Desk

Leave a Reply