ಬೆಳಗಾವಿ: ಬೆಳಗಾವಿಯಿಂದ ರತ್ನಾಗಿರಿಗೆ ತೆರಳುತ್ತಿರುವ ವೇಳೆ ದಾರಿ ಮಧ್ಯದಲ್ಲೆ ಬಸ್ಗೆ ಪಾದಚಾರಿಯೊಬ್ಬ ಅಡ್ಡಿ ಬಂದಿದ್ದು, ಆತನನ್ನು ರಕ್ಷಿಸಲು ಹೋದ ಬಸ್ ಚಾಲಕನ ನೇರವಾಗಿ ಕಂದಕಕ್ಕೆ ಇಳಿಸಿದ್ದಾರೆ. ಬಸ್ ಪಲ್ಟಿಯಾಗಿ ಬಸ್ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ನಲ್ಲಿದ್ದ 13 ಜನರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಾದಚಾರಿಯನ್ನು ರಕ್ಷಿಸಲು ಹೋಗಿ ಬೆಳಗಾವಿ ಬಸ್ ಕಂದಕಕ್ಕೆ ಉರುಳಿರುವ ಘಟನೆ ಕೊಲ್ಹಾಪುರದ ಜಾಧವವಾಡಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.