ಬೆಳಗಾವಿ

ಜಾತ್ರೆಗೆ ಮುಂಚೆ ನಡೆಯಿತು ಹುಕ್ಕೇರಿಯಲ್ಲಿ ಹಾಫ್ ಮರ್ಡರ್ 

ಹುಕ್ಕೇರಿ : ಪಟ್ಟಣದಲ್ಲಿ ರವಿವಾರ ಸಂಜೆ ಹಾಫ್ ಮರ್ಡರ್ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಲ್ಲೆಗೊಳಗಾದ ಇಮಿಯಾಜ್ ಹುಸೇನ್ ಮುಲ್ಲಾ 27 ವರ್ಷದ ಯುವಕ ಇತನಿಗೆ ಕುತ್ತಿಗೆ ಹಿಂಭಾಗದಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. 
 
ಆರೋಪಿತರಾದ 1) ಜಾವೀದ್ ಮಹಮ್ಮದಯಾಕೂಬ ಖಾಜಿ 1) ನಯೀಮ್ ಲಿಯಾಕತ್ ಖಾಜಿ 3)ಜಹೀರ ಲಿಯಾಕತ ಖಾಜಿ ಎಂದು ಗುರುತಿಸಲಾಗಿದೆ ಮದುವೆ ವಿಚಾರವಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹುಕ್ಕೇರಿ ಪಟ್ಟಣದ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಪ್ರಾರಂಭ ಆಗುವು ಮೊದಲೇ ಈ ಪ್ರಕರಣ ದಾಖಲಾಗಿದೆ.
 
ಹಲವು ವರ್ಷಗಳ ಹಿಂದೆ ಇಂತಹ ಬೇರೆ ರೀತಿಯಲ್ಲಿ ಘಟನೆಗಳು ಜಾತ್ರೆಯಲ್ಲಿ ನಡೆದು ಹುಕ್ಕೇರಿ ಪಟ್ಟಣಕ್ಕೆ ಕಪ್ಪು ಚುಕ್ಕೆ ಗುರುತಿಸಲಾಗಿದೆ. ಈಗ ಜಾತ್ರೆ ಇದೆ  ಮಂಗಳವಾರದಿಂದ  ಪ್ರಾರಂಭಗೊಳ್ಳಲಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದರೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಹುಕ್ಕೇರಿ ಪಟ್ಟಣದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸ್‌ ಭದ್ರತೆ ಒದಗಿಸಿ ಮುಂದೆ ಆಗುವಂತಹ ಅನಾಹುತಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
TV24 News Desk
the authorTV24 News Desk

Leave a Reply