ಬೆಳಗಾವಿ:
ಸುರಿಯುವ ಮಳೆಯನ್ನೂ ಲೆಕ್ಕಿಸದೆ ಬೆಳಗಾವಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೇಸ್ ಯುವಘಟಕ ಪ್ರತಿಭಟನೆ ನಡೆಸಿತು. ಮಾಜಿ ಪ್ರಧಾನಿ ಇಂದಿರಾ ಗಾಂಧೀಯವರನ್ನು ಹಿಟ್ಲರ್ ಗೆ ಬಿಜೆಪಿ ಹೋಲಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯ್ತು. ನಗರದ ಸಾಹಿತ್ಯ ಭವನದಿಂದ ಪ್ರಾರಂಭವಾದ ಕಾಂಗ್ರೇಸ್ ಪ್ರತಿಭಟನೆ ಚನ್ನಮ್ಮ ವೃತ್ತಕ್ಕೆ ಬಂದು ಅಲ್ಲಿಂದ ಡಿಸಿ ಕಚೇರಿಯವರೆಗೆ ಸಾಗುವ ದಾರಿ ಮಧ್ಯೆ ಕಾಡಾ ಕಚೇರಿಯಲ್ಲಿರುವ ಸಂಸದ ಜಗದೀಶ ಶೆಟ್ಟರಗ ಕಚೇರಿಯ ಒಳಗೆ ನುಗ್ಗಲು ಕೈ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಕಾಂಗ್ರೇಸ್ ಕಾರ್ಯಕರ್ತರನ್ನು ಒಳ ಪ್ರವೇಶ ಮಾಡದಂತೆ ತಡೆದರು. ಇನ್ನು ಪ್ರಧಾನಿ ಮೋದಿ ಹಾಗೂ ಹಿಟ್ಲರ್ ಅವರ ಭಾವಚಿತ್ರವನ್ನು ಒಂದೇ ಭಾವಚಿತ್ರದಲ್ಲಿ ಪ್ರದರ್ಶನ ಮಾಡಿ ಮೋದಿಯವರನ್ನು ಹಿಟ್ಲರ್ ಗೆ ಹೋಲಿಸಿ ಪ್ರತಿಭಟನೆ ಮಾಡಿದರು. ರ್ಯಾಲಿಯುದ್ದಕ್ಕೂ ನರೇಂದ್ರ ಮೋದಿಯವರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ವಿರುದ್ದವೂ ದಿಕ್ಕಾರ ಕೂಗಿ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.



