ಜಿಲ್ಲೆಬೆಳಗಾವಿ

ಬಾಕಿ ಬಿಲ್ ಕೊಡಿ ಸ್ವಾಮಿ! ಕ ನೀ ನಿ ಮುಂದೆ ಗುತ್ತಿಗೆದಾರರ ಧರಣಿ!!

ಬೆಳಗಾವಿ:

ರಾಜ್ಯ ಸರ್ಕಾರ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನೇನೋ ನೀಡಿದೆ. ಆದರೆ ಗ್ಯಾರಂಟಿ ಗೋಜಿನ ನಡುವೆ ಮಾಡಬೇಕಾದ ಮುಖ್ಯ ಕರ್ತವ್ಯವನ್ನು ಸರ್ಕಾರ ಮರೆಯುತ್ತಿದೆಯಾ ಎಂಬ ಅನುಮಾನಗಳು ಪ್ರಾರಂಭವಾಗುತ್ತಿವೆ. ಈ ಹಿಂದೆಯೂ ಸಹ ಗುತ್ತಿಗೆದಾರರು ತಮ್ಮ ಬಾಕಿ ಬಿಲ್‌ಗಾಗಿ ಪ್ರತಿಭಟಿಸಿದ ಉದಾಹರಣೆಗಳು ಕಣ್ಮುಂದೆಯೇ ಇವೆ. ಸಧ್ಯ ಅಂತದ್ದ ಘಟನೆ ‌ಬೆಳಗಾವಿಯಲ್ಲಿ ನಡೆದಿದೆ‌. ಕರ್ನಾಟಕ ರಾಜ್ಯ ನೀರಾವರಿ ನಿಗಮದಲ್ಲಿ(ಕ ನೀ ನಿ) ವಿವಿಧ ಕೆಲಸಗಳನ್ನು ಮಾಡಿದ ಗುತ್ತಿಗೆದಾರರು ತಮಗೆ ಬರಬೇಕಾದ ಬಾಕಿ ಬಿಲ್ ಗಾಗಿ ಪ್ರತಿಭಟನೆ ‌ಕುಳಿತಿದ್ದಾರೆ.‌ಬೆಳಗಾವಿಯಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಕಚೇರಿಯ ಮುಂದೆ ಸುಮಾರು 30 ಕ್ಕೂ ಹೆಚ್ಚು ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ.‌ಗುತ್ತಿಗೆ ಹಿಡಿದು ಕಾಮಗಾರಿ ಪೂರ್ಣಗೊಳಿಸಿ ತಿಂಗಳುಗಳೇ ಕಳೆದರೂ ಸಹ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಬಿಲ್ ಬಂದಿಲ್ಲ ಹೀಗಾಗಿ ಗುತ್ತಿಗೆದಾರರು ಕಚೇರಿಯ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ.ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ‌ ಕೂಗಿ ಗುತ್ತಿಗೆದಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ.ನೀರಾವರಿ ನಿಗಮದಲ್ಲಿ ತಾವು ಮಾಡಿದ ಕಾಮಗಾರಿಗಳ ಬಿಲ್ ಶೀಘ್ರವೇ ಬಿಡುಗಡೆ ‌ಮಾಡುವಂತೆ ಗುತ್ತಿಗೆದಾರರು ಒತ್ತಾಯಿಸಿದ್ದಾರೆ.

TV24 News Desk
the authorTV24 News Desk

Leave a Reply