ದೇಶ

ಶೀಘ್ರದಲ್ಲೇ ಮಧ್ಯಂತರ ವಿಧಾನಸಭೆ ಚುನಾವಣೆ

ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಯ ಭವಿಷ್ಯ ನುಡಿದಿದ್ದಾರೆ. ಮತ್ತು ಚುನಾವಣೆಗೆ ತಯಾರಿಯನ್ನು ನಡೆಸಲು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಮುಂಬೈ ಪಕ್ಷದ ಕೇಂದ್ರ ಕಚೇರಿ `ಸೇನಾ ಭವನ’ದಲ್ಲಿ ನಡೆದ ಪಕ್ಷದ ವಿಧಾನಸಭಾ ಕ್ಷೇತ್ರ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಉದ್ಧವ್ ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ  ಇಂದು ತಿಳಿಸಿದ್ದಾರೆ.

ನಂತರ ಶಿವಸೇನೆ ವಕ್ತಾರ ಅರವಿಂದ್ ಸಾವಂತ್ ಸಭೆಯ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಶೀಘ್ರದಲ್ಲೇ ಮಧ್ಯಂತರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಠಾಕ್ರೆ ಭವಿಷ್ಯ ನುಡಿದಿದ್ದಾರೆ, ಮತ್ತು ಸಿದ್ಧತೆಗಳನ್ನು ನಡೆಸಲು ಕಾರ್ಯಕರ್ತರಿಗೆ  ತಿಳಿಸಿದ್ದಾರೆ ಎಂದು ಹೇಳಿದರು.   ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಹಾರಾಷ್ಟ್ರಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಿದ್ದರಿಂದ ಮಧ್ಯಂತರ ಚುನಾವಣೆ ಮುನ್ಸೂಚನೆ ಎಂದು ಸಾವಂತ್ ಹೇಳಿದರು. ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನ ಮತದಾರರನ್ನು ಸೆಳೆಯಲು ಪ್ಯಾಕೇಜ್‌ಗಳು ಮತ್ತು ಘೋಷಣೆಗಳ ಮೂಲಕ ಆಮಿಷವೊಡ್ಡುತ್ತಿರುವಂತೆಯೇ, ಪ್ರಧಾನಿಯವರ ಈ ಘೋಷಣೆಯು ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ ಎಂಬುದರ ಬಗ್ಗೆ ಸೂಚಕವಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭೆಯ ಅವಧಿಯು 2024 ರಲ್ಲಿ ಮುಕ್ತಾಯಗೊಳ್ಳಲಿದ್ದು ,ಏಕನಾಥ್ ಶಿಂಧೆ ಅವರೊಂದಿಗೆ ಬಂಡಾಯವೆದ್ದಿರುವ ಪಕ್ಷದ ಶಾಸಕರು ರಾಜೀನಾಮೆ ನೀಡಿ ಮತದಾರರನ್ನು ಹೊಸದಾಗಿ ಎದುರಿಸಬೇಕು ಎಂದು ಶಿವಸೇನೆಯ ಠಾಕ್ರೆ ಬಣ ಒತ್ತಾಯಿಸಿದೆ.

ಠಾಕ್ರೆ ನೇತೃತ್ವದ ಸರ್ಕಾರವನ್ನು ಬಂಡಾಯದಿಂದ ಉರುಳಿಸಿದ ನಂತರ ಜೂನ್‌ನಲ್ಲಿ ಅಧಿಕಾರಕ್ಕೆ ಬಂದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಹಲವಾರು ದೊಡ್ಡ ಯೋಜನೆಗಳನ್ನು ಗುಜರಾತ್‌ಗೆ ಹೋಗಲು ಬಿಟ್ಟಿದೆ,ಇವುಗಳಲ್ಲಿ 1.54 ಲಕ್ಷ ಕೋಟಿ ರೂ.ಗಳ ವೇದಾಂತ ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಯೋಜನೆ ಮತ್ತು 22,000 ಕೋಟಿ ರೂಪಾಯಿಗಳ ಟಾಟಾ-ಏರ್‌ಬಸ್ ಸಿ-295 ಮಿಲಿಟರಿ ಸಾರಿಗೆ ವಿಮಾನ ಯೋಜನೆ ಸೇರಿವೆ ಎಂದು ಆರೋಪಿಸಿದರು

 

TV24 News Desk
the authorTV24 News Desk

Leave a Reply