ಬೆಳಗಾವಿಬೆಳಗಾವಿ ನಗರ

ನಾಡದ್ರೋಹಿ ಎಂ ಇ ಎಸ್ ಸಂಘಟನೆ ಬ್ಯಾನ ಮಾಡಿ :ಕರವೇ

ರಾಮದುರ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ತಮ್ಮ ಬೇಡಿಕೆಯಲ್ಲಿ ಪ್ರಮುಖವಾಗಿ ಬೆಳಗಾವಿ ಗಡಿ ವಿವಾದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಇದ್ದರೂ ಮಹಾರಾಷ್ಟ್ರ ರಾಜ್ಯದ ಸರಕಾರ ತನ್ನ ಉದ್ದಟತನ ತೋರಿಸುತ್ತಿದೆ.ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಭಾಷಾ ಸೌಹಾರ್ದತೆ ಹಾಳುಗೇಡಿಸುವ ಕೆಲಸ ಮಾಡುತ್ತಿರುವ ನಾಡದ್ರೋಹಿ ಚಟುವಟಿಕೆಯಲ್ಲಿ ಬಾಗಿಯಾಗಿರುವ ಎಂ ಇ ಎಸ್ ಹಾಗು ಶಿವಸೇನೆ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು.
ಗಡಿ ಸಂರಕ್ಷಣಾ ಆಯೋಗದ ಕಚೇರಿ ಸೇರಿ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಿ ಸುವರ್ಣ ಸೌಧಕ್ಕೆ ಶಕ್ತಿ ತುಂಬುವ ಕೆಲಸ ಮಾಡಿ, ಮಹಾರಾಷ್ಟ್ರ ಸಚಿವರ ಬೆಳಗಾವಿ ಪ್ರವೇಶ ನಿಷೇಧಿಸಬೇಕು. ಮಹಾರಾಷ್ಟ್ರದ ಜತ್ತ ಭಾಗದ ಕನ್ನಡಿಗರು ಕರ್ನಾಟಕ ಸರಕಾರದ ಬೆಂಬಲಕ್ಕೆ ನಿಂತಿದಲ್ಲದೇ, ಕರ್ನಾಟಕ ಸೇರುವ ಇಚ್ಛೆಯನ್ನು ಬಯಸಿದ್ದಾರೆ ಈ ಕೂಡಲೇ ಸರಕಾರ ಹಿರಿಯ ಸಚಿವರಿಬ್ಬರನ್ನು ಹಾಗು ಹಿರಿಯ ಅಧಿಕಾರಿಗಳನ್ನು ಗಡಿಭಾಗ ಜತ್ತ ಪ್ರದೇಶಕ್ಕೆ ಕಳುಹಿಸಿ ಅಲ್ಲಿಯ ಕನ್ನಡಿಗರಿಗೆ ಆತ್ಮ ಸ್ಥೈರ್ಯ ತುಂಬಿ  ಬೆಂಬಲ ಸೂಚಿಸುವ ಕೆಲಸ ಮಾಡಬೆಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ  ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಕರವೇ ಜಿಲ್ಲಾಉಪಾಧ್ಯಕ್ಷ ಸುರೇಶ ಗವನ್ನವರ,  ಗಣೇಶ ರೋಖಡೆ, ವಿನಾಯಕ ಹಟ್ಟಿಹೊಳಿ ,ಬಾಳು ಜಡಗಿ, ರಮೇಶರಾವ ಯರಗಣ್ಣವರ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply