ಬೆಳಗಾವಿ: ಮಗಳ 5 ನೇ ವರ್ಷದ ಹುಟ್ಟು ಹಬ್ಬ ಆಚರಿಸಲು ಸುವರ್ಣ ಸೌಧ ಬಾಡಿಗೆಗೆ ಕೊಡುವಂತೆ ಪತ್ರ ಬರೆದು ಸಭಾಪತಿ, ಸಬಾಧ್ಯಕ್ಷ, ಹಾಗೂ ಜಿಲ್ಲಾಧಿಕಾರಿಗೆ ಅನುಮತಿ ಕೇಳಿದ ನ್ಯಾಯವಾದಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ನಿವಾಸಿ ಮಲ್ಲಿಕಾರ್ಜುನ ಚೌಕಾಶಿ ಎಂಬುವವರಿಂದ ಪತ್ರ ವರ್ಷದಲ್ಲಿ 15 ದಿನ ಮಾತ್ರ ಸುವರ್ಣ ಸೌಧ ಕಂಗೊಳಿಸುತ್ತದೆ ಉಳಿದ ದಿನಗಳಲ್ಲಿ ಭೂತ ಬಂಗಲೆ ಅಂತಾಗಿರುವ ಸೌಧ ಮಗಳ ಹುಟ್ಟು ಹಬ್ಬಕ್ಕೆ ಉಪಯೋಗ ಆಗಲಿ ಎನ್ನುತ್ತಿರುವ ನ್ಯಾಯವಾದಿ ಚೌಕಾಶಿ ಈ ರೀತಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿರುವ ಆರ್ಥಿಕ ನಿರ್ವಹಣಾ ವೆಚ್ಚವನ್ನು ಉಳಿಸಬಹುದು. ಸದ್ಯ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ನಮಗೆ ಬಾಡಿಗೆ ನೀಡಬೇಕೆಂದು ಕಳಕಳಿಯ ವಿನಂತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ಮಗಳ ಹುಟ್ಟು ಹಬ್ಬಕ್ಕೆ ಸುವರ್ಣಸೌಧ ಬಾಡಿಗೆಗೆ ಕೆಳಿದ ತಂದೆ.