ಬೆಳಗಾವಿಬೆಳಗಾವಿ ನಗರ

ಸರ್ಕಾರಿ ನೌಕರಿ ಕೊಡಿಸುವದಾಗಿ ವಂಚಿಸಿದ್ದ ಆರೋಪಿ ಅರೆಸ್ಟ್

ಬೆಳಗಾವಿ:ಸರ್ಕಾರಿ ನೌಕರಿ ಕೊಡಿಸುವದಾಗಿ ಯುವಕರಿಂದ ಹಣ ಪಡೆದು ವಂಚಿಸಿ ಪರಾರಿಯಾಗಿದ್ದ  ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಯರನಾಳ ಗ್ರಾಮದ ರಾಜು ಪಾಟೀಲ ಪ್ರತಿಯೊಬ್ಬರ ಹತ್ತಿರ ೬ ಲಕ್ಷ ರೂ.ಅಂತೆ  ೬೭ ಲಕ್ಷ ಪಡೆದು ಪಂಗನಾಮ ಹಾಕಿ ಕಳೆದ ಮಾರ್ಚನಲ್ಲಿ ಪರಾರಿಯಾಗಿದ್ದ. ಮೋಸಕ್ಕೆ ಒಳಗಾದ ಯುವಕರು ಇವನ ವಿರುದ್ಧ ದೂರು ದಾಖಲಿಸಿದ್ದರು.

ಮೋಸಕ್ಕೆ ಒಳಗಾದ ಕುಳ್ಳೂರಿನ ಸಂಗಪ್ಪ ದಳವಾಯಿ, ಲೋಕಾಪುರದ ಜಗದೀಶ ತಡಸಲೂರ , ಈಶ್ವರ ವಗ್ಗಣ್ಣವರ್, ಮಹೇಶ್ ವಗ್ಗಣ್ಣವರ್, ಮುದೋಳದ ಸಂತೋಷ ಒಂಟಿ, ಮಂಜುನಾಥ್ ಮಳಲಿ, ರಾಮದುರ್ಗದ ಮೈಲಾರ ಗಡ್ಡಿ, ಗೋಕಾಕದ ಸುರೇಶ ಕೋಟೆ, ಬಸವರಾಜ್ ಬೆಟಗೇರಿ  ಎಂಬುವವರು ಮೋಸ ಹೋದವರು,

ನಗರ ಪೊಲೀಸ ಆಯುಕ್ತರಾದ ಬೋರಲಿಂಗಯ್ಯ, ಡಿಸಿಪಿ ಪಿ ವಿ ಸ್ನೇಹಾ ನೇತೃತ್ವದಲ್ಲಿ, ಹಾಗು ಪೊಲೀಸ ತಂಡ ಆರೋಪಿಯನ್ನು ಅರೆಸ್ಟ್ ಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ

TV24 News Desk
the authorTV24 News Desk

Leave a Reply