Uncategorized

ರೈತರಿಂದ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನ೬೦ ಕ್ಕೂ ಹೆಚ್ಚು ರೈತರ ಬಂಧನ

ಹಸಿರು ಸೇನೆ ಮುಖಂಡ ಗಣೇಶ ಈಳಿಗೇರ ಮಾತನಾಡಿ ರೈತರಿಗೆ ನಿಜವಾದ ಬೆಲೆ ಸಿಗುವವರೆಗೆ ಹೋರಾಟ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ .ಅಲ್ಲದೆ ಮೊನ್ನೆ ಬೆಂಗಳೂರಿನಲ್ಲಿ  ನಡೆದ ಸಭೆಯಲ್ಲಿ ಸಕ್ಕರೆ ಸಚಿವರು ಅಕ್ಟೊಬರ್ ೨೦ ರ ವರೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಜೊತೆ ಸಮಲೋಚನೆ ಮಾಡಿ ತಮಗೆ ಸಿಹಿ ಸುದ್ದಿ ಕೊಡುವದಾಗಿ ಭರವಸೆ ನೀಡಿದ್ದರು ಎಂದು ಆರೋಪಿಸಿದರು. ಇಲ್ಲಿವರೆ ಯಾವುದೇ ಸುದ್ದಿ ಬಂದಿಲ್ಲ. ಇನ್ನು ಮುಂದೆ ಬೀದಿಗಿಳಿದು ಉಗ್ರ ಸ್ವರೂಪದ  ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಕ್ಕೆ ನೀಡಿದ್ದಾರೆ

 ನೆರೆಯ ರಾಜ್ಯಗಳಲ್ಲಿ ಕಬ್ಬಿನ ಬೆಲೆಯನ್ನು ಘೋಷಿಸಿದ್ದರೂ ಕೂಡ ನಮ್ಮ ಕರ್ನಾಟಕ ಸರ್ಕಾರ ಮಾತ್ರ ಕಣ್ಣು ಮುಚ್ಚಿ ರೈತರಿಗೆ ಮೋಸ ಮಾಡುತ್ತಲೇ ಬರ್ತಾ ಇದೆ ಎಂದು ಗಣೇಶ ಈಳಿಗೇರ  ಆರೋಪಿಸಿದರು .

ಸಂದಭದಲ್ಲಿ ಪ್ರಕಾಶ ನಾಯಕ, ರಾಘವೇಂದ್ರ ನಾಯಕ , ಶಿವಾನಂದ ಮುಗಾಳಿಹಾಳ  ಉಪಸ್ಥಿತರಿದ್ದರು

TV24 News Desk
the authorTV24 News Desk

Leave a Reply