ಅಜ್ಞಾತ ಸ್ಥಳದಿಂದ ಜಾಮೀನಿಗೆ ಅರ್ಜಿಹಾಕಿದ ಶ್ರೀಗಳು
ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಅಭಿನವ ಹಾಲ ಶ್ರೀ ಅಜ್ಞಾತ ಸ್ಥಳದಿಂದಲೇ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬಂಧನದ ಭೀತಿಯಲಿರುವ ಶ್ರೀಗಳು ಕಳೆದ 3 ದಿನದಿಂದ ನಾಪತ್ತೆಯಾಗಿದ್ದು ಆದರೆ ಪರ ವಕೀಲರು 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ , ನಾಳೆ ಅರ್ಜಿ ವಿಚಾರಣೆ ನಡೆಯಲಿದೆ.
ವಂಚನೆ ಹಿಂದೆ ಇನ್ನು ಯಾರಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. ಎಫ್ಐಆರ್ ನಲ್ಲಿ ಶೀಗಳು 3ನೇ ಆರೋಪಿಯಾಗಿದ್ದು ಪ್ರಕರಣ ದಾಖಲಾಗುತ್ತಿದಂತೆ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠ ಅಭಿನವ ಹಾಲ ಅಜ್ಞಾತ ಸ್ಥಳ ಸೇರಿದ್ದಾರೆ.
ದೂರುದಾರ ಗೋವಿಂದ್ ಪೂಜಾರಿಯಿಂದ ಒಂದೂವರೆ ಕೋಟಿ ಸ್ವಾಮೀಜಿ ಪಡೆದಿದ್ದಾರೆ ಎಂಬ ಆರೋಪವಿದ್ದು ಇದರಿಂದ ಪಾರಾಗಲು ಕಾನೂನು ಮೊರೆ ಹೋಗಿದ್ದಾರೆ. ಇನ್ನು ಸಿಸಿಬಿ ತಂಡ ಸ್ವಾಮಿಜಿ ಬಂಧನಕ್ಕೆ ಹುಡುಕಾಟ ಮುಂದುವರೆಸಿದೆ.