ರಾಮದುರ್ಗ: ಸಾಲಹಳ್ಳಿ ಗ್ರಾಮಕ್ಕೆ ನವೆಂಬರ್ 29 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರು, ಶಾಸಕರ ಆಗಮಿಸುತ್ತಿರುವ ಹಿನ್ನಲೆ ಇಂದು, ಕಾರ್ಯಕ್ರಮ ನಿಯೋಜಿಸಿದ ಸ್ಥಳದಲ್ಲಿ ಪೂರ್ವಭಾವಿ ಸಿದ್ದತೆಯನ್ನು ಪೋಲಿಸ್ ಅಧಿಕಾರಿಗಳು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಎನ್.ಬಿ ನಂದಗಾವಿ, ಡಿವೈಎಸ್ಪಿ ರಾಮನಗೌಡಾ ಹಟ್ಟಿ, ಸಿಪಿಐ ಐ.ಎರ್ ಪಟ್ಟಣಶೆಟ್ಟಿ, ಕಡಕೋಳ ಪಿಎಸ್ಐ ಸಿದ್ದು ಉನದಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಮಲ್ಲಿಕಾರ್ಜುನ ಕೊಪ್ಪದ ಹಾಗೂ ಸಾಲಹಳ್ಳಿ ಗ್ರಾಮದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.