ಅಥಣಿ: ಕಾಂಗ್ರೇಸ್ ಸೇರ್ಪಡೆ ಬಳಿಗ ಪ್ರಥಮ ಬಾರಿಗೆ ಅಥಣಿಗೆ ಬಂದ ತಕ್ಷಣವೇ ಕಾಂಗ್ರೇಸ್ ಟಿಕೆಟ್ ವಂಚಿತ ಮುಖಂಡರ ಮನೆಗಳಿಗೆ ತರಳಿ ಪಕ್ಷಕ್ಕೆ ಸೇರಿದ ಬಗ್ಗೆ ಮತ್ತು ಚುನಾವಣಾ ತಯಾರಿ ಕುರಿತು ಚರ್ಚೆ ನಡೆಸಲು ಗಜಾನನ ಮಂಗಸೂಳಿ, ಧರೆಪ್ಪ ಠಕ್ಕನ್ನವರ ಮತ್ತು ಎಸ್. ಕೆ ಬುಟಾಳಿ ಸೇರಿದಂತೆ ೧೧ ಜನ ಟಿಕೆಟ್ ಕೇಳಿದ್ದ ಕಾಂಗ್ರೆಸ್ ಮುಖಂಡರ ಮನೆಗೆ ಲಕ್ಷ್ಮಣ ಸವದಿ ಬೇಟಿ ಮಾಡಿ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆ ನಡೆಸುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಂಡರು.
ಈ ಬಾರಿ ಆಕಸ್ಮಿಕ ಮತ್ತು ಅನಿವಾರ್ಯ ರಾಜಕೀಯ ಬದಲಾವಣೆ ಬಳಿಕ ತಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ತರುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ಎಲ್ಲರೂ ಹೆಚ್ಚಿನ ಶ್ರಮ ಹಾಕುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ ಮತ್ತು ಅದಕ್ಕಾಗಿ ತಮ್ಮೇಲ್ಲರ ಸಹಕಾರ ಸಲಹೆ ಸೂಚನೆಗಳ ನನಗೆ ಬೇಕು. ನಿಮ್ಮ ಅನತಿಯಂತೆ ನಾನು ನಡೆದುಕೊಳ್ಳುವಾದಗಿ ಹೇಳಿದರು. ನಾನು ಯಾವುದೆ ಕಾಗ್ರೇಸ್ ಮೂಲ ಕಾರ್ಯಕರ್ತ ಹೊಸ ಕಾರ್ಯಕರ್ತ ಅಂತಾ ಬೇಧ ಮಾಡುವ ಪ್ರಶ್ನೆ ಇಲ್ಲಾ ಎಲ್ಲರನ್ನು ಒಗ್ಗೂಡಿಸಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡಿ ನನ್ನ ಪರವಾಗಿ ಪ್ರಚಾರ ಮಾಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಶಿವು ಗುಡ್ಡಾಪೂರ, ರಾವಸಾಬ ಐಹೊಳೆ, ಕೆ. ಎ ವಣಜೊಳ, ರಾಹುಲ ಮಾಚಕನೂರ, ಶ್ರೀಕಾಂತ ಪೂಜಾರಿ, ಮಹಾಂತೇಶ ಠಕ್ಕಣ್ಣವರ, ದತ್ತಾ ವಾಸ್ಟರ್, ಶಂಕರ ಮಗದೂಮ, ವಿಲಿನ ಯಳಮಲ್ಲೆ, ಶಿವಾನಂದ ಸೌದಾಗರ, ರಾಹುಲ್ ಮಂಗಸೂಳಿ, ಶ್ರೀಮಂತ ಬಿಸೆ, ಪ್ರಕಾಶ ಭಜಂತ್ರಿ, ಪ್ರಮೋದ ಬಿಳ್ಳೂರ, ಬೀರಪ್ಪ ಯಂಕಚ್ಚಿ, ವಿಶ್ವನಾಥ ಗಡದೆ, ಉಮರ್ ಹುಲಗಬಾಳಿ, ರೇಖಾ ಪಾಟೀಲ, ಸುನೀತಾ ಐಹೊಳೆ, ಕಲಾವತಿ ಕಿತ್ತೂರ, ಮಹಾದೇವಿ ಹೋಳಿಕಟ್ಟಿ, ಜಾನಕಿ ದೇವರಮನಿ, ಶೋಭಾ ಮಾಳಿ, ಲಕ್ಷ್ಮೀಬಾಯಿ ಭಜಂತ್ರಿ, ಭಿಮಾ ನನ್ನವರೆ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು