ಬೆಳಗಾವಿ:ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ತೆ ಮಾಡಿರುವ ಘಟನೆ ಶಿವಬಸವನಗರದಲ್ಲಿ ನಡೆದಿದೆ. ಕಲ್ಲಿನಿಂದ ಜಜ್ಜಿ ನಡು ಬೀದಿಯಲ್ಲೇ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ.ಬೆಳಗಾವಿಯ ಶಿವಬಸವನಗರದಲ್ಲಿ ತಡರಾತ್ರಿ ಘಟನೆ ನಡೆದಿದೆ. ರಾಮನಗರ ನಿವಾಸಿ ನಾಗರಾಜ್ ಗಾಡಿವಡ್ಡರ್(26) ಹತ್ಯೆ.ಬೈಕ್ ಮೇಲೆ ಹಿಂಬಾಲಿಸಿಕೊಂಡು ಬಂದು ಕಲ್ಲಿನಿಂದ ಹೊಡೆದು ಹತ್ಯೆ ಆಗಿದೆ. ಮೂರು ಜನ ಯುವಕರಿಂದ ನಾಗರಾಜ್ ಹತ್ಯೆ ಮಾಡ್ಲಾಗಿದೆ, ಹತ್ಯೆ ಬಳಿಕ ಮೂವರು ಒಂದೊಂದು ದಿಕ್ಕಿಗೆ ಎಸ್ಕೇಪ್ ಆದ ಕೊಲೆಗಡುಕರು. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರಿಂದ ಮಾಹಿತಿ ಸಂಗ್ರಹ.ಡಿಸಿಪಿ ಶೇಖರ್, ಎಸಿಪಿ ಕಟ್ಟಿಮನಿ ಭೇಟಿ ಪರಿಶೀಲನೆ ನಡೆಸಿದರು. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವ ನಿನ್ನೆ ರಾತ್ರಿಯೇ ಕಳುಹಿಸಲಾಗಿದೆ.
tv24plus.in > Blog > ಜಿಲ್ಲೆ > ಬೆಳಗಾವಿ > ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ..!