ಗೋಕಾಕ: ಸೋಮವಾರ ಭೀಮನ ಅಮಾವಾಸ್ಯೆಯಾಗಿದ್ದುರಿಂದ ಶಂಕರ ಜಗಮತ್ತಿ ಹಾಗೂ ಪ್ರಿಯಾಂಕ ಜಗಮತ್ತಿ ದಂಪತಿಗಳು ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಪತ್ನಿಯ ಕಣ್ಣು ಮುಂದೆ ಪತಿಯನ್ನು ಹಂತಕ ಕೊಚ್ಚಿ ಕೊಲೆ ಮಾಡಿದ್ದನು. ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ಬಂದಿದೆ.
ಕೊಲೆ ಪ್ರಕರಣದಲ್ಲಿ ಪೊಲೀಸರು ಪ್ರಿಯಾಂಕಾಳ ಪ್ರಿಯಕರ ಶ್ರೀಧರ ತಳವಾರ(21) ಶಂಕರ ಪತ್ನಿ ಪ್ರಿಯಾಂಕ ಜಗಮತ್ತಿ(21) ಪೊಲೀಸರು ಬಂಧಿಸಿದ್ದಾರೆ. ಮೊದಲೇ ಗಂಡನ್ನನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಪ್ರಿಯಾಂಕ ಮನೆಯಿಂದ ಬರುವಾಗಲೇ ಪ್ರಿಯಕರ ಶ್ರೀಧರ ತಳವಾರಗೆ ಕಾಲ್ ಮಾಡಿ ಬಂದಿದ್ದಳು. ದೇವರ ದರ್ಶನ ಮುಗಿಸಿಕೊಂಡು ಹೊರಗೆ ಬಂದು ಪ್ರಿಯಾಂಕ ಗಂಡ ಶಂಕರಗೆ ಬೈಕ್ ತರಲು ಹೇಳಿದ್ದಳು. ಶ್ರೀಧರ ಶಂಕರನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಎಲ್ಲವನ್ನು ಕಂಡು ಗೊತ್ತಿಲದ ಹಾಗೆ ಪ್ರಿಯಾಂಕ ನಾಟಕವಾಡಿದ್ದಳು.
ಪೊಲೀಸರು ಪ್ರಾಥಮಿಕ ತನಿಖೆ ಮಾಡಿದಾಗ ಪ್ರಿಯಾಂಕ ಹಾಗು ಶ್ರೀಧರ ಪ್ರೇಮ ಕಹಾನಿ ಇದೆ ಎಂದು ಗೊತ್ತಾಗಿದೆ. ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ ಪಕ್ಕ ಇವಳದ್ದೇ ಪ್ಲಾನ್ ಅಂತಾ ಪೊಲೀಸರು ಪ್ರಿಯಾಂಕ ಹಾಗು ಪ್ರಿಯಕರ ಶ್ರೀಧರ ತಳವಾರ ಬಂಧಿಸಿದ್ದಾರೆ.
ಮನೆಯವರ ಒತ್ತಾಯದ ಮೇರೆಗೆ ಸೋದರಮಾವ ಶಂಕರನನ್ನು ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಪ್ರಿಯಾಂಕ ಸಕತ್ ಪ್ಲಾನ್ ಮಾಡಿ ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ. ಮೂಡಲಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.