ಕಾಂಗ್ರೆಸ್ ಸರಕಾರ ಕುರಿತು ಸ್ಪೋಟಕ ಭವಿಷ್ಯ ನುಡಿದ ಸ್ವಾಮೀಜಿ
ನೊಣವಿನಕೆರೆ ಸ್ವಾಮೀಜಿ ಸ್ಪೊಟಕ ಭವಿಷ್ಯ..
ಇತ್ತೀಚೆಗೆ ತಾಲೂಕಿನ ನೊಣವಿನಕೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಯಶ್ವಂತ ಗುರೂಜಿ, ಕಾಂಗ್ರೆಸ್ ಪಕ್ಷಕ್ಕೆ ಸ್ವಷ್ಟ ಬಹುಮತ ಬಂದಿದೆ. 135 ಸ್ಥಾನಗಳು ಸಿಕ್ಕಿವೆ. ಈ ವಿಚಾರವನ್ನು ಕಾಂಗ್ರೆಸ್ನ ಅಲೆ ಇಲ್ಲದೇ ಇದ್ದಂತಹ ಸಮಯದಲ್ಲೇ ನಾವು ಮೊದಲೇ ಹೇಳಿದ್ದೇವು. ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಿದೆ ಅಂತಾ ಹೇಳಿದ್ದೆ ಅದು ನಿಜವಾಗಿದೆ ಎಂದಿದ್ದಾರೆ.
ರಾಜಕೀಯ, ನೈಸರ್ಗಿಕ, ದೇಶದ ರಾಜಕೀಯ, ಇವುಗಳ ಬಗ್ಗೆ ನಿಖರವಾಗಿ ಭವಿಷ್ಯದ ಕಾಲಜ್ಞಾನ ಹೇಳುವ ರಾಜ್ಯದ ಅನೇಕ ಸ್ವಾಮೀಜಿಗಳಲ್ಲಿ ಯಶವಂತ ಗೂರೂಜಿ ಕೂಡಾ ಒಬ್ಬರು. ಈ ಹಿಂದೆ ಅವರು ಆಡಿದ್ದ ಅನೇಕ ಭವಿಷ್ಯಗಳು ನಿಜವಾಗಿವೆ.
ಇವರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದವರು. ಈ ಹಿಂದೆ ಅವರು ಕರೋನ, ರಾಜ್ಯ ಸರಕಾರ, ಮತ್ತು ಯಾರು ಮುಖ್ಯಮಂತ್ರಿಯಾಗುತ್ತಾರೆ. ಸಿಎಂ ಸಿದ್ದುಗೆ ಬಲವೇನು.. ಡಿಕೆಶಿ ಗೆ ಯಾವಗ ಶುಭಕಾಲ ಹೀಗೆ ಅನೇಕ ಭವಿಷ್ಯಗಳನ್ನು ನುಡಿದಿದ್ದಾರೆ ಅವು ಕೂಡಾ ಸತ್ಯವಾಗಿವೆ ಅಂತಾ ನಂಬಲಾಗುತ್ತಿದೆ.
ಈಗ ಅವರು ಮತ್ತೊಮ್ಮೆ ಸರಕಾರ ಕುರಿತು ಹೇಳಿರುವ ಸ್ಪೋಟಕ ಭವಿಷ್ಯ ಎಲ್ಲರಿಗೂ ಶಾಕ್ ನೀಡಿದೆ.
ಅಧಿಕಾರ ಬಂದ ಮೇಲೆ ಆಗಿನ್ನೂ ಸಿಎಂ ಘೋಷಣೆ ಆಗಿರಲಿಲ್ಲ. ಹಗ್ಗಜಗ್ಗಾಟ ನಡೆಯುತ್ತಿತ್ತು ಅವಾಗಲೂ ನಾನು ಮುಂಚೆಯೇ ಹೇಳಿದ್ದೆ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಾರೆ ಎಂದು ಅದರಂತೆ ಕಾಂಗ್ರೆಸ್ ಆರಿಸಿ ಬಂದಾಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಆಗಿದ್ದಾರೆ ಎಂದರು.
ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮೇ 30ರವರೆಗೆ ಅಷ್ಟೇ ಯೋಗವಿತ್ತು. ಅಷ್ಟೇ ಈ ಅವಧಿ ಮುಗಿದರೆ ಮತ್ತೆ 1 ವರ್ಷ 8 ತಿಂಗಳ ಕಾಲ ಮುಖ್ಯಮಂತ್ರಿ ಆಗುವ ಯೋಗ ಡಿಕೆ ಶಿವಕುಮಾರ್ಗೆ ಇರಲ್ಲ ಎಂದು ಗುರೂಜಿ ಖಡಕ್ಕಾಗಿ ನುಡಿದಿದ್ದರು. ಇದರಿಂದಾಗಿ ಮಂದೆ ಡಿಕೆಶಿಯೂ ಕೂಡಾ ಮುಂದೆ ಸಿಎಮ್ ಆಗಬಹುದಾ ಅಂತಾ ಪ್ರಶ್ನೆಗಳು ಮೂಡುತ್ತಿವೆ.
ಇದೆ ವೇಳೆ.. ಪ್ರತಿ ವರ್ಷ ನಾವು ಮಕರ ಸಂಕ್ರಾಂತಿ ಪರ್ವ ಕಾಲದಲ್ಲಿ ಕಾಲ ಜ್ಞಾನ ತೆಗೆದು ನೋಡುತ್ತೇವೆ. ಅದರಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಭವಿಷ್ಯವನ್ನೂ ಕೂಡ ನೋಡ್ತೇವೆ. ಅದರಲ್ಲಿನ ಎಲ್ಲಾ ಅಂಶಗಳು ಕೂಡ ನಿಜ ಆಗಿದೆ ಎಂದು ಗುರೂಜಿ ಹೇಳಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಸಿಎಂ ಗಾದಿಯಿಂದ ಕೆಳಗಿಳಿಯುತ್ತಾರೆ ಎಂಬ ಭವಿಷ್ಯವನ್ನು ನುಡಿಯಲಾಗಿತ್ತು.ಅದರಂತೆ ನಿಜ ಆಗಿದೆ. ಕೊರೊನಾ ಮಹಾಮಾರಿ ಬಗ್ಗೆ, ರಮೇಶ್ ಜಾರಕಿಹೊಳಿಗೆ ಹೆಣ್ಣಿನ ಕಂಟಕ ಇರುವ ಬಗ್ಗೆ ಭವಿಷ್ಯ ನುಡಿದಿದ್ದರು. ಇವೆಲ್ಲವೂ ಸತ್ಯ ಆಗಿದೆ.
ಆದರೆ, ಈಗ ಸ್ವಾಮೀಜಿ ಅವರು ಮತ್ತೊಂದು ಭವಿಷ್ಯ ನುಡಿದಿದ್ದು ಸಿದ್ದು ಸರಕಾರದಲ್ಲಿ ಅಲ್ಲೊಲ ಕಲ್ಲೋಲ ಮಾಡಿದೆ. ಅದೇ ಏನಪ್ಪ ಅಂದ್ರೆ.. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಒಂದು ಹೆಣ್ಣಿನ ಸಲುವಾಗಿ ಜಗಳವಾಡಿಕೊಳ್ಳುತ್ತಾರೆ. ಬೀದಿಗಿಳಿಯುತ್ತಾರೆ. ಆಗ ಪಕ್ಷ ಛಿದ್ರ ಛಿದ್ರವಾಗುತ್ತದೆ ಮತ್ತೆ ಹೊಸ ಸರ್ಕಾರ ರಚಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.