ಜಿಲ್ಲೆಬೆಳಗಾವಿ

ಹೊಳೆಮ್ಮ ದೇವಿಗೆ ಜಲಕಂಟಕದ ಆತಂಕ!

ಬೆಳಗಾವಿ:

ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆ ಅಬ್ಬರ ಮುಂದುವರೆದಿದ್ದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಪಕ್ಕದಲ್ಲಿಯೇ ಇರುವ ಸುಪ್ರಸಿದ್ದ ಬಡಕುಂದ್ರಿ ಗ್ರಾಮದ
ಹೊಳೆಮ್ಮ ದೇವಿ ದೇವಸ್ಥಾನಕ್ಕೆ ನೀರು ನುಗ್ಗುವ ಭೀತಿ ಶುರುವಾಗಿದೆ.ಈಗಾಗಲೇ ದೇವಸ್ಥಾನದ ಕಂಪೌಂಡ್ ವರೆಗೂ ನೀರು ತಲುಪಿದ್ದು ಇನ್ನು ಕೇವಲ ಎರಡು ಅಡಿ ನೀರು ಹೆಚ್ಚಾದರೆ ದೇವಸ್ಥಾದನ ಅವರಣ ಜಲಾವೃತ ಆಗುವ ಸಾಧ್ಯತೆ ಇದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿರುವ ಪ್ರಸಿದ್ಧ ಹೊಳೆಮ್ಮ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಬಂದು ದೇವಿ ದರ್ಶನ ಪಡೆದು ಪುನೀತರಾಗುತ್ತಾರೆ. ಹಿರಣ್ಯಕೇಶಿ ನದಿಯ ಪಕ್ಕದಲ್ಲಿಯೇ ದೇವಸ್ಥಾನವಿದ್ದು ಇನ್ನೆರಡು ಅಡಿ ನೀರು ಹೆಚ್ಚಾದರೆ ದೇವಸ್ಥಾನದ ಆವರಣದೊಳಗೆ ನೀರು ನುಗ್ಗುವ ಭೀತಿ ಇದೆ.ಇನ್ನು  ದೇವಸ್ಥಾನ ಅಕ್ಕಪಕ್ಕದ ಕಬ್ಬು,ಹಾಗೂ ಗೋವಿನ ಜೋಳದ  ಬೆಳೆಗಳಿಗೂ ಹಿರಣ್ಯಕೇಶಿ ನದಿ ನೀರು ಹೊಕ್ಕಿದ್ದು ರೈತರೂ ಸಹ ಸಧ್ಯ ಆತಂಕದಲ್ಲಿದ್ದಾರೆ.

TV24 News Desk
the authorTV24 News Desk

Leave a Reply