ಬೆಳಗಾವಿಬೆಳಗಾವಿ ನಗರ

 ಕರ್ನಾಟಕದಲ್ಲಿ ಅಚ್ಛೇದಿನ ಬರಲಿವೆ: ರಾಜು ಸೇಠ 

ಬೆಳಗಾವಿ: ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ  ಆಸೀಪ್ ರಾಜು ಸೇಠ್ ಕ್ಷೇತ್ರದ ಜನ ಎಲ್ಲಧರ್ಮ ಸಮಾಜ ಎಲ್ಲ ಭಾಷಿಕರು ಕಾರ್ಯಕರ್ತರು ತುಂಬ ಸಹಕಾರ ತೋರಿದರು.ಕಾಂಗ್ರೇಸ್ ಪಕ್ಷದಲ್ಲಿಯ ತತ್ವಸಿದ್ದಾಂತಗಳು ಹಾಗೂ ಸಿದ್ದಾಮಯ್ಯ ಡಿ ಕೆ ಶಿವಕುಮಾರ,ಸರ್ಜೇವಾಲಾ ಮತ್ತು ಕಾಂಗ್ರೇಸ್ ರಾಷ್ಟ್ರೀಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ರಾಜ್ಯದಲ್ಲಿ ಕಾಂಗ್ರೇಸ್ ಅಭೂತಪೂರ್ವ ಜಯಗಳಿಸಿದೆ ಎಂದು ಹೇಳಿದರು.
ಜಗದೀಶ ಶೆಟ್ಟರ ಪರ ಮಾತನಾಡಿ ಶೆಟ್ಟರ ಸೋತಿದ್ದು ತುಂಬಾ ಬೇಸರ ತಂದಿದೆ ತುಂಬ ಸರಳ ಹಾಗೂ ಮೃದು ಸ್ವಭಾವದ ವ್ಯಕ್ತಿತ್ವ ತುಂಬ ಆತ್ಮಿಯರಾದ ಶೆಟ್ಟರ ಪರವಾಗಿ ಸದಾ ಇರುತ್ತಾರೆ ಎಂದರು.ಕಾಂಗ್ರೇಸ್ ಗೆಲುವಿನಿಂದ ಕರ್ನಾಟಕದಲ್ಲಿ ಅಚ್ಛೇದಿನ ಬರಲಿವೆ ಎಂದರು.ಕ್ಷೇತ್ರದಲ್ಲಿ ಉಳಿದಿರುವ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡಿ ತೋರಿಸುತ್ತೇನೆ ಅಲ್ಲದೆ ಸಮಾಜವನ್ನು ಸಮಾನವಾಗಿ ತಗೆದುಕೊಂಡು ಹೊಗುವ ಕೆಲಸ ಮಾಡುತ್ತೇನೆ ಎಂದು ರಾಜು ಸೇಠ ಹೇಳಿದರು. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಮಾದ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿ ತಿರ್ಮಾನ ಹೈಕಮಾಂಡಗೆ ಬಿಟ್ಟ ವಿಚಾರ ಎಂದರು.
TV24 News Desk
the authorTV24 News Desk

Leave a Reply