ಬೆಂಗಳೂರು: ಸೈಕ್ಲೋನ್ ಮೋಚಾದ ಪರಿಣಾಮ ರಾಜ್ಯದಲ್ಲಿ ಮೇಲೆ ಸಹ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಕಳೆದ ಕೆಲ ದಿನಗಳ ಹಿಂದೆ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ಮತದಾನದ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿತ್ತು.ಅಲ್ಲದೇ ಕಳೆದ ಕೆಲದ ದಿನಗಳಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿತ್ತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಅದೃಷ್ಟ ಎಂಬಂತೆ ಮತದಾನದ ದಿನವಾದ ಇಂದು ಅಷ್ಟೇನೂ ಮಳೆಯ ವಾತಾವರವಿಲ್ಲ.
ಆದರೆ ಸೈಕ್ಲೋನ್ ಮೋಚಾದ ಪರಿಣಾಮ ಯಾವುದೇ ಕ್ಷಣದಲ್ಲಿ ರಾಜ್ಯದ ಮೇಲೆ ಪರಿಣಾಮ ಬೀರಲಿರುವ ಕಾರಣ ಜನರು ಮಧ್ಯಾಹ್ನದ ಒಳಗೇ ಮತದಾನ ಮಾಡುವುದು ಒಳಿತು.
ಮೇ ಎರಡನೇ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ‘ಮೋಚಾ’ ಎಂಬ ಹೆಸರಿನ ಚಂಡಮಾರುತ ರಚನೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಈ ಚಂಡಮಾರುತಕ್ಕೆ ಮೋಚಾ ಎಂಬ ಹೆಸರು ಬಂದ ಕಾರಣ ಅಷ್ಟೇ ಕುತೂಹಲಕರವಾಗಿದೆ. ಯೆಮೆನ್ ದೇಶ ಈ ಚಂಡಮಾರುತಕ್ಕೆ ಕೆಂಪು ಸಮುದ್ರದ ಕರಾವಳಿಯ ಬಂದರು ನಗರವಾದ ‘ಮೋಚಾ’ ಹೆಸರನ್ನು ಸೂಚಿಸಿದೆ.
ಉತ್ತರ ಕರ್ನಾಟಕ ಭಾಗವನ್ನು ಗಮನಿಸುವುದಾದರೆ, ಮೇ 11 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.