ಬೆಳಗಾವಿ: ಮಹಾನಗರ ಪಾಲಿಕೆ ಹನುಮಾನ ನಗರದ ರಸ್ತೆಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದ ಎಲ್ಲ ಮಳಿಗೆಗಳನ್ನು ತೆಗೆಯುವ ಕಾರ್ಯ ನಡೆಸಿತ್ತು. ಹನುಮಾನ ವೃತ್ತದ ಬಳಿಯ ಅಂಗಡಿಗಳನ್ನು ತೆಗೆದಿದ್ದರಿಂದ ಬಡ ವ್ಯಾಪಾರಿಗಳಿಗೆ ಜೀವನೋಪಾಯಕ್ಕೆ ತೊಂದರೆಯಾಗಿದೆ. ಇದನ್ನು ಮನಗಂಡು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಹನುಮಾನ ನಗರದಲ್ಲಿ ಮಾರಾಟಗಾರರಿಗೆ ಹೊಸ ಜಾಗ ನಿಗದಿ ಮಾಡಿದ್ದಾರೆ. ಮಾಜಿ ಶಾಸಕ ಫಿರೋಜ್ ಸೇಠ್ ಅವರೊಂದಿಗೆ ಈ ಸ್ಥಳವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರಿಗೆ ತಳ್ಳುವಗಾಡಿ ವ್ಯಾಪಾರಿಗಳು ಕೃತಜ್ಞತೆ ಸಲ್ಲಿಸಿದರು
ಇತ್ತೀಚಿಗೆ ಹನುಮಾನ ನಗರದಲ್ಲಿ ಹನುಮಾನ ವೃತ್ತದ ಬಳಿ ಇತ್ತೀಚೆಗೆ ನಗರಸಭೆ ಕೆಲವು ತಳ್ಳುವಗಾಡಿ ವ್ಯಾಪಾರಿಗಳ ಅಂಗಡಿಗಳನ್ನು ಅತಿಕ್ರಮಣ ಮಾಡಿ ತೆಗೆದಿತ್ತು. ಆ ಕುಟುಂಬದವರಿಗೆ ರಾಜು ಸೇಠ್ ಅವರಿಂದ ಪುನರ್ವಸತಿ ಕಲ್ಪಿಸಲಾಗಿದೆ.