ಬೆಳಗಾವಿ: ಹಿಂಡಲಗಾ ಸಭಾಂಗಣದಲ್ಲಿ ಶ್ರೀರಾಮ ಸೇನಾ ಪದಾಧಿಕಾರಿಗಳ ಆಯ್ಕೆ ಸಮಾರಂಭ ನಡೆಸಲಾಯಿತು. ಈ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ ಅವರು ವಿಠ್ಠಲ ಗಡ್ಡಿ ಅವರನ್ನು ಬೆಳಗಾವಿ ನೂತನ ಜಿಲ್ಲಾಧ್ಯಕ್ಷರಾಗಿ ಹಾಗೂ ರವಿ ಪೂಜೇರಿ ಅವರಿಗೆ ಜಿಲ್ಲಾಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ವಿಭಾಗೀಯ ಅಧ್ಯಕ್ಷರಾಗಿ ರವಿ ಕೋಕಿತ್ಕರ, ವಿಭಾಗೀಯ ಕಾರ್ಯದರ್ಶಿಗಳಾಗಿ ವಿನಯ ಹಂಗರೊಳ್ಳಿ ಅದರಂತೆ ತಾಲೂಕು ಹಾಗೂ ಗ್ರಾಮೀಣ ಭಾಗದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
tv24plus.in > Blog > ಜಿಲ್ಲೆ > ಬೆಳಗಾವಿ > ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷರಾಗಿ ವಿಠ್ಠಲ ಗಡ್ಡಿ