ಬೆಳಗಾವಿಬೆಳಗಾವಿ ನಗರ

ಮತ್ತೆ ಪುಂಡಾಟಿಕೆ ತೋರಿದ ಮರಾಠಿ ಪುಂಡರು 

ಬೆಳಗಾವಿ: ನಗರದಲ್ಲಿ ನಿನ್ನೆ ರಾಮ ನವಮಿ ನಿಮಿತ್ಯ  ಭಕ್ತರು,ಯುವಕರು  ಅತಿ ಉಲ್ಲಾಸದಿಂದ ರಾಮನವಮಿ ಆಚರಣೆ ಮಾಡುವ ಸಂದರ್ಭದಲ್ಲಿ ಕೆಲವು ಮಾರಾಠಿ ಪುಂಡರು ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಕಿಡಿಗೇಡಿತನ ಮೆರೆದಿದ್ದಾರೆ. 
ನಗರದ ಟಿಳಕಚೌಕ ಬಳಿ ಗುರುವಾರ ರಾತ್ರಿ ರಾಮನವಮಿ ಮೆರವಣಿಗೆ ವೇಳೆ ನೂರಾರು ಭಕ್ತರು ಭಗವಾ ಧ್ವಜ ಹಿಡಿದು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕನ್ನಡ ಬಾವುಟ ಹಿಡಿದು ಮೆರವಣಿಗೆಯಲ್ಲಿ  ಮಂಜುನಾಥ ಡಂಗ ಕುಣಿಯುತ್ತಿದ್ದಾಗ ಮರಾಠಿ ಯುವಕರು ಹಲ್ಲೆ ಮಾಡಿ ಕನ್ನಡ ದ್ವಜಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ. 
ಘಟನೆ ಬಗ್ಗೆ ಕನ್ನಡಪರ ಸಂಘಟನೆಗಳು ಖಂಡಿಸಿವೆ. ಖಡೇಬಜಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
TV24 News Desk
the authorTV24 News Desk

Leave a Reply