ಬೆಳಗಾವಿ

ಜೈನಮುನಿ ಹತ್ಯೆ ಸಿಐಡಿಯಿಂದ ಇನ್ವೆಸ್ಟಿಕೇಷನ್ ಸ್ಟಾರ್ಟ್..!   

ಚಿಕ್ಕೋಡಿ ಬಿಡು ಬಿಟ್ಟ ಸಿಐಡಿ ತಂಡ ಜೈನಮುನಿಗಳ ಹತ್ಯೆ ಪ್ರಕರಣದ ತನಿಖೆ  

ಬೆಳಗಾವಿ:  ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಸಿಐಡಿ ಎಸ್ಪಿ ವೆಂಕಟೇಶ ಹಾಗೂ ಡಿವೈಎಸ್ಪಿ ಹೆಚ್ ಡಿ ಕುಲಕರ್ಣಿ ನೇತೃತ್ವದ ತಂಡ ಚಿಕ್ಕೋಡಿಗೆ ಆಗಮಿಸಿ ಮೊದಲ ದಿನದಂದೇ ತನಿಖೆಗೆ ಇಳಿದಿದೆ.ಬೆಳಗಾವಿ ಜಿಲ್ಲಾ ಪೊಲೀಸರಿಂದ ಸಿಐಡಿ ತಂಡ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡಿತು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ ಮಾಳಿ ಹಾಗೂ ಹಸನ್ ಡಾಲಾಯತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅಲ್ಲದೇ, ಮುನಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿ ತನಿಖೆ ಮುಂದೆವರೆಸಿದ್ದರು, ಸಿಐಡಿ ತಂಡ ಚಿಕ್ಕೋಡಿಯಲ್ಲಿ ಬೀಡು ಬಿಟ್ಟಿದ್ದು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ವಿಚಾರಣೆ ಮಾಡುವ ಸಾಧ್ಯತೆಗಳು ಇದ್ದು, ಮತ್ತಷ್ಟು ಸಾಕ್ಷ್ಯಗಳನ್ನು ಕಲೆ ಹಾಕುವ ಸಾಧ್ಯತೆ ಇದೆ.

TV24 News Desk
the authorTV24 News Desk

Leave a Reply