ಬೆಳಗಾವಿ : ಬಸವಣಕುಡಚಿ ಗ್ರಾಮದ ಬಸವಣ್ಣ ಮಂದಿರ ಆವರಣದಲ್ಲಿ ನಿನ್ನೆ ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆರವರು ಬಸವಣಕುಡಚಿ ಜನ ನನ್ನ ಮೇಲೆ ತುಂಬಾ ಪ್ರೀತಿ ವಿಶ್ವಾಸವನ್ನು ಇಟ್ಟಿದ್ದು, ೨೦೧೮ ರ ಚುನಾವಣೆಗೆ ನಾನು ಸ್ಪರ್ದೆ ಮಾಡಿದಾಗಲೂ ನನಗೆ ಪ್ರತಿಶತ ೧೦೦% ರಷ್ಟು ಮತದಾನ ಮಾಡಿದ ಫಲವಾಗಿ ನಾನು ಶಾಸಕನಾಗಿದ್ದೇನೆ ಎಂದು ಹೇಳಿದರು.
ನಾನು ಶಾಸಕನಾದ ಮೇಲೆ ಬಸವಣಕುಡಚಿಯಲ್ಲಿ ೧ ಕೋಟಿ ವೆಚ್ಚದಲ್ಲಿ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ನಿರ್ಮಾಣ, ಕನ್ನಡ ಮತ್ತು ಮರಾಠಿ ಶಾಲೆಗಳ ನಿರ್ಮಾಣ, ೧೫ ಲಕ್ಷ ವೆಚ್ಚದಲ್ಲಿ ಅಂಗನವಾಡಿ ನಿರ್ಮಾಣ, ೨೦ ಲಕ್ಷ ವೆಚ್ಚದಲ್ಲಿ ಸ್ಮಶಾನ ನಿರ್ಮಾಣ, ಗ್ರಾಮದಲ್ಲಿ ೧ಕೋಟಿಗೂ ಅಧಿಕ ವೆಚ್ಚದಲ್ಲಿ ರಸ್ತೆ ಮತ್ತು ಗಟಾರು ನಿರ್ಮಾಣ, ದೇವರಾಜ ಅರಸ ಕಾಳೋನಿಯಲ್ಲಿ ೩ ಕೊಟಿಗೂ ಅಧಿಕ ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಕರ್ನಾಟಕ ಹೌಸಿಂಗ ಬೋರ್ಡನಲ್ಲಿ ರಸ್ತೆ, ಬೀದಿ ದೀಪ ಅಳವಡಿಕೆ ಸೇರಿದಂತೆ ಒಟ್ಟಾರೆಯಾಗಿ ಗ್ರಾಮದಲ್ಲಿ ಸುಮಾರು ೧೦ ಕೋಟಿಗೂ ಹೆಚ್ಚು ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ ಎಂದು ಮಾಹಿತಿ ನೀಡಿದರು.
ಬಸವಣಕುಡಚಿಯಲ್ಲಿ ಮಹಿಳೆಯರಿಗಾಗಿ ಆರೋಗ್ಯ ಕೆಂದ್ರ ಸ್ಥಾಪನೆಗೆ ಹಣ ಬಿಡುಗಡೆ ಆಗಿದ್ದು, ಕಟ್ಟಡ ನಿರ್ಮಾಣಕ್ಕೆ ಜಮೀನು ಅವಶ್ಯಕವಿರುವುದರಿಂದ ಬಸವಣಕುಡಚಿಯಲ್ಲಿ ಜಮೀನು ಸಿಕ್ಕ ತಕ್ಷಣ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದರು. ಬರುವ ದಿನಗಳಲ್ಲಿ ಮಹಿಳೆಯರು ಸ್ವಾವಲಂಭಿ ಆಗಬೇಕು ಅದಕ್ಕಾಗಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದರು. ನಾನು ಇಂದು ಯಾವುದೇ ಆಮೀಶವನ್ನು ನೀಡಿಲ್ಲ ಆದರೂ ಸಾವಿರಾರು ಮಹಿಳೆಯರು ಇಂದು ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಬಂದಿದ್ದು, ತುಂಬಾ ಸಂತೋಷ ಆಗಿದ್ದು ನಿಮ್ಮ ಆಶಿರ್ವಾದ ನನ್ನ ಮೇಲೆ ಇರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸೇವಕರಾದ ಬಸವರಾಜ ಮೋದಗೇಕರ, ಲಕ್ಷ್ಮೀ ಮೋದಗೇಕರ, ಸಮಾಜ ಸೇವಕಿ ಸುವರ್ಣಾ ಬೇಡಕಾ, ರಾಧಿಕಾ ಮೂತಗೇಕರ, ಸುನಂದಾ ಮುನ್ನೋಳ್ಳಿ, ರೇಖಾ ಸೂರ್ಯವಂಶಿ, ವೈಶಾಲಿ ಏಕನೇಕರ, ಸುಜಾತಾ ಚೌಗುಲೆ, ನಿರ್ಮಲಾ ಗಿರಿ, ರೂಪಾ ಚೌಗುಲಾ, ಕಾಂಚನ ದಿವಟೆ, ಮಂಜುಳಾ ಬೆಕ್ಕಡಿ, ಜ್ಯೋತಿ ಬೇಡಕಾ, ರಜನಿ ಮೋದಗೇಕರ, ಜೈಶೀಲಾ ದೇಸಾಯಿ ಸೇರಿಂದತೆ ಸಾವಿರಾರು ಮಹಿಳೆಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.