ರಾಮದುರ್ಗ: ಕ್ರೂಜರ್ ವಾಹನ ಮತ್ತು ಎರಡು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲಿ ಮೃತಪಟ್ಟು ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ಹತ್ತಿರ ನಡೆದಿದೆ.
ಘಟನೆಯಲ್ಲಿ ರಾಮದುರ್ಗ ಪಟ್ಟಣದ ಭಾಗ್ಯನಗರದ ನಿವಾಸಿ 25 ವಯಸ್ಸಿನ ಮಾನಿಂಗ ನಂಜಪ್ಪ ಅಚಮಟ್ಟಿ, ಹಾಗೂ ಮಡ್ಡಿಗಲ್ಲಿಯ 26 ವಯಸ್ಸಿನ ರಫೀಕ್ ಚಲವಾದಿ ಮೃತಪಟ್ಟ ದುರ್ದೈವಿಗಳು.
ಈ ಅಪಘಾತದಲ್ಲಿ ಗಾಯಗೊಂಡವರು ಪಟ್ಟಣದ ಆಶ್ರಯ ಪ್ಲಾಟನ ನಿವಾಸಿ ಉನ್ನಿಸ್ ಮಹಮ್ಮದ್ ಪಟೇಲ ಈತನನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಮತ್ತು ಭಾಗ್ಯನಗರದ ನಿವಾಸಿ ಮಾರುತಿ ಬಂಡಿವಡ್ಡರ್ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಎರಡು ಬೈಕ್ ನಲ್ಲಿ ನಾಲ್ಕು ಜನ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಗೌಂಡಿ ಕೆಲಸವನ್ನು ಮುಗಿಸಿಕೊಂಡು ರಾಮದುರ್ಗದ ಕಡೆಗೆ ಬರುವ ವೇಳೆ ಮತ್ತು ರಾಮದುರ್ಗ ಕಡೆಯಿಂದ ಶಿರಸಂಗಿ ಕಡೆಗೆ ಹೊರಟಿದ್ದ ಕ್ರೂಜರ್ ವಾಹನದ ಮಧ್ಯೆ ಡಿಕ್ಕಿಯಾಗಿ ಈ ಅಪಘಾತ ನಡೆದಿದೆ ಈ ಘಟನೆಯಿಂದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.