Uncategorized

ಹೋಳಿ ಹುಣ್ಣಿಮಯೆಂದೆ ದುರ್ಘಟನೆ ಈಜಲು ಹೋಗಿದ್ದ ಬಾಲಕರಿಬ್ಬರ ಸಾವು

ಬೆಳಗಾವಿ ಜಿಲ್ಲೆಯ ಯಕ್ಸಂಬಾ ಪಟ್ಟಣದಲ್ಲಿ ಹೋಳಿ ಹಬ್ಬ ಸಂತಸದ ಮಧ್ಯೆ ಭೀಕರ ಘಟನೆ ನಡೆದಿದೆ. ಬಣ್ಣ ಆಡಿ ಸ್ನಾನಕ್ಕೆ ಬಾವಿಗೆ ಹೋಗಿದ್ದ ಇಬ್ಬರು ಬಾಲಕರು ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಈ ದಾರುಣ ಘಟನೆಯಲ್ಲಿ, 11 ವರ್ಷದ ವೇದಾಂತ ಹಿರೇಕೋಡಿ ಮತ್ತು 9 ವರ್ಷದ ಮನೋಜ ಕಲ್ಯಾಣಿ ಬಾವಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಬಣ್ಣ ಆಡಿ ಸಂಜೆ ಸ್ನಾನ ಮಾಡಲು ಬಾವಿಗೆ ತೆರಳಿದ್ದ ಈ ಇಬ್ಬರು ಮಕ್ಕಳು, ತಕ್ಷಣವೇ ನೀರಿನಲ್ಲಿ ಮುಳುಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಬಾವಿ ಬಳಿಗೆ ಧಾವಿಸಿದರೂ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ಬಾಲಕರ ಸಾವಿನ ವಿಷಯ ತಿಳಿದ ತಕ್ಷಣ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

TV24 News Desk
the authorTV24 News Desk

Leave a Reply