ಧಾರವಾಡ

ಪ್ರವಾಸಕ್ಕೆ ಹೊರಟವರು ಮಸಣಕ್ಕೆ ಸೇರಿದರು 

ಹುಬ್ಬಳ್ಳಿ : ಕಲಘಟಗಿ ಸಮೀಪ ಕಾರು ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ  ಸಂಭವಿಸಿ ಹುಬ್ಬಳಿಯ ಮೂವರು ಯುವಕರು ಸಾವನ್ನಪ್ಪಿರುವ  ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.
ಪ್ರವಾಸಕ್ಕೆಂದು ಕಾರವಾರಕ್ಕೆ ತೆರಳುತ್ತಿದ್ದ ಕಾರು ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ.  ೬  ಜನ ಯುವಕರು ಹೊರಟಿದ್ದ ಕಾರು ಸಂಗಟಿಕೊಪ್ಪದಲ್ಲಿ ಟ್ಯಾಂಕರ್ ನಡುವೆ ಅಪಘಾತ ಉಂಟಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್‌ನಲ್ಲಿ ಕೊನೆಯುಸಿರೆಳೆದ್ದಾನೆ. ಮೊಹಮ್ಮದ್ ಇಶಾನ್ (19)   ಮೊಹಮ್ಮದ್ ಸೈಫ್(22) ಹಾಗೂ ಇಸ್ಮಾಯಿಲ್ (19) ಮೃತ  ದುರ್ದೈವಿಗಳಾಗಿದ್ದು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply