ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಕನ್ನಡಿಗರ ಅಸಮಾಧಾನ.!

ಬೆಳಗಾವಿಯಲ್ಲಿ ಕನ್ನಡಿಗರು ಎರಡನೇ ದರ್ಜೆಯಾ..? ಎಂದು ಗಡಿನಾಡಿನ ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ಸದ್ಯ ಸಕತ್ ವೈರಲ್ ಆಗಿದ್ದು, ಕನ್ನಡಿಗರ ಕಡೆಗಣನೆಗೆ ಕಿಡಿ ಕಾರಿದ್ದಾರೆ.ಬೆಳಗಾವಿ ಮಹಾನಗರ ಪಾಲಿಕೆಯ ಈ ಪೋಟೊ ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಶಿವಾಜಿಯ ಚಿಕ್ಕದಾದ ಮೂರ್ತಿ ಇಡಲಾಗಿದೆ. ನಮ್ಮ ಪ್ರಶ್ನೆ ಏನಂದ್ರೆ,ಯಾಕೆ ಶಿವಾಜಿಗೆ ಸಿಗುವ ಗೌರವ ನಮ್ಮ ಕನ್ನಡದ ಮಹನಿಯರಿಗೆ ಸಿಗುತ್ತಿಲ್ಲಾ? ನಾವು ಕೂಡ ಶಿವಾಜಿಯನ್ನಾ ಗೌರವಿಸುತ್ತೇವೆ, ಅವರ ಹೋರಾಟದ ಬಗ್ಗೆ ನಮಗೆ ಗೌರವವಿದೆ. ಆದರೆ ಬೆಳಗಾವಿಯ ಸ್ಥಳಿಯ ರಾಜಕಾರಣಿಗಳು ಕೇವಲ ಮರಾಠಿ ಭಾಷಿಕರನ್ನಾ ಅತೀಯಾಗಿ ಓಲೈಕೆ ಮಾಡುವುದು ನಿಲಿಸಬೇಕು.
 
ಕರ್ನಾಟಕ ಸರ್ಕಾರದ ಕಟ್ಟಡದಲ್ಲಿ ಕನ್ನಡಿಗರಿಗೆ ಈ ತರಹ ಅನ್ಯಾಯ ಆಗುತ್ತಿದ್ದರು ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುವುದು ಯಕ್ಷಪ್ರಶ್ನೆಯಾಗಿದೆ. ನಮ್ಮದೇ ನೆಲದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವಣ್ಣನವರನ್ನಾ ಮಹಾನಗರ ಪಾಲಿಕೆಯಲ್ಲಿ ಕೇವಲ ಪೋಟೊಗಳಿಗೆ ಸೀಮಿತ ಮಾಡಿದ್ದಿರಾ, ಈ ಮಹನಿಯರ ಮೂರ್ತಿಯನ್ನಾ ಕೂಡ ಇದೇ ತೆರನಾಗಿ ಮಹಾನಗರ ಪಾಲಿಕೆಯಲ್ಲಿ ಯಾವಾಗ ಇಡ್ತಿರಾ ರಾಜಕಾರಣಿಗಳೆ ಹಾಗೂ ಅಧಿಕಾರಿಗಳೇ? ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.
TV24 News Desk
the authorTV24 News Desk

Leave a Reply