ಬೆಳಗಾವಿ

ಚಿಕ್ಕೋಡಿ ಸಬ್ ರಜಿಸ್ಟರ ಲೋಕಾಯುಕ್ತ ಬಲೆಗೆ 

ಬೆಳಗಾವಿ: ಚಿಕ್ಕೋಡಿ ಸಬ್ ರಜಿಸ್ಟರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, 30 ಸಾವಿರ ಲಂಚ ಸ್ವೀಕರಿಸುವಾಗ ಚಿಕ್ಕೋಡಿ ಸಬ್ ರಜಿಸ್ಟಾರ ಬಲೆಗೆ ಬಿದಿದ್ದಾರೆ.‌
ಜಿ‌.ಪಿ. ಶಿವರಾಜು ಲೋಕಾಯುಕ್ತ ಬಲೆಗೆ ಬಿದ್ದ ಸಬ್ ರಜಿಸ್ಟಾರ ಆಗಿದ್ದು, ಲೋಕಾಯುಕ್ತ ಎಸ್.ಪಿ ಯಶೋದಾ ವಂಟಗೂಡಿ ನೇತೃತ್ವದಲ್ಲಿ ನಡೆದ ದಾಳಿ ನಡೆದಿದ್ದು, ಜಮೀನು ಖಾತೆ ಬದಲಾವಣೆ ವಿಚಾರವಾಗಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸಬ್ ರಜಿಸ್ಟಾರ ಶಿವರಾಜು ಸದ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ರಾಜು ಎಂಬುವವರ ಬಳಿ ಹಣಕ್ಕೆ ಬೇಡಿಕೆ ದೂರು ದಾಖಲಿಸಿದ ಹಿನ್ನಲೆ ಇಂದು ಲೋಕಾಯುಕ್ತರ ದಾಳಿ ನಡೆಸಿದ್ದಾರೆ.
TV24 News Desk
the authorTV24 News Desk

Leave a Reply