ಬೆಳಗಾವಿ

48 ಗಂಟೆಗಳಲ್ಲಿ ಕೊಲೆ ಆರೋಪಿಗಳ ಬಂಧನ..!

48 ಗಂಟೆಗಳಲ್ಲಿ ಕೊಲೆ ಪ್ರಕರಣ ಭೇದಿಸಿದ ಖಾನಾಪೂರ ಪೊಲೀಸರು ..!
ಖಾನಾಪೂರ-ಪಣಜಿ ಹೈವೆ ಮಾಡುತ್ತಿರುವ ಕಾಮಗಾರಿ ಯಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದ ರವಿ ಶರಣಪ್ಪಾ ಹಿರೇಕುರಬರ, (35) ವರ್ಷ, ಸಾ: ಅಸ್ಥಿ, ತಾ: ತಾಳಿಕೋಟಿ, ಜಿ: ವಿಜಯಪೂರ ಇವನಿಗೆ ದಿನಾಂಕ: 26/03/2024 ರಂದು ರಾತ್ರಿ 09 ಗಂಟೆಯ ಸುಮಾರಿಗೆ ಖಾನಾಪೂರ ತಾಲೂಕಿನ ಮಾಡಿಗುಂಜಿ ಗ್ರಾಮ ಹದ್ದಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಜಯಕುಮಾರ ತಂದೆ ನಿಂಗಣ್ಣಾ. ವಯಾ: 27 ವರ್ಷ, ಸಾ: ತೇವರ ವಡಗೇರ, ಜಿ: ಯಾದಗಿರಿ ಮತ್ತು ಯಲ್ಲಪ್ಪಾ ತಂದೆ ಜಟ್ಟೆಪ್ಪಾ, ವಯಾ: 35 ವರ್ಷ. ಸಾ: ಗುಂಡಲಗೇರ, ತಾ: ಹುಣಸಗಿ, ಜಿ: ಯಾದಗಿರಿ ಇವರು ಹಲ್ಲೆಗೈದು ಕೊಲೆ ಮಾಡಿರುತ್ತಾರೆ ಮೃತನ ತಾಯಿಯು ದಿನಾಂಕ: 28-03-2024 ರಂದು ನೀಡಿದ ದೂರಿನ ಮೇರೆಗೆ ಖಾನಾಪೂರ ಪೊಲೀಸ್ ಪ್ರಕರಣ ದಾಖಲಾಗಿತ್ತು.
ಆರೋಪಿತರಿಬ್ಬರ ಶೀಘ್ರ ಬಂಧನಕ್ಕಾಗಿ ಒಂದು ವಿಶೇಷ ತನಿಖಾ ತಂಡ ರಚಿಸಿದ್ದರು.

ಈ ವಿಶೇಷ ತನಿಖಾ ತಂಡವು ಶುಕ್ರವಾರ: 29-03-2024 ರಂದು ಇಬ್ಬರು ಆರೋಪಿತರಿಗೆ ಯಾದಗಿರಿ ಜಿಲ್ಲೆಯಲ್ಲಿ ಪತ್ತೆ ಮಾಡಿಕೊಂಡು ಬಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿರುತ್ತಾರೆ.

ಈ ವಿಶೇಷ ತನಿಖಾ ತಂಡದ ಕಾರ್ಯಚರಣೆಯನ್ನು ರವಿ ಡಿ ನಾಯ್ಕ. ಡಿ.ಎಸ್.ಪಿ ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ ರಾಮಚಂದ್ರ ನಾಯಕ. ಪೊಲೀಸ್ ಇನ್ಸಪೆಕ್ಟರ ಖಾನಾಪೂರ ಪೊಲೀಸ್ ಠಾಣೆ ರವರು ಪಿ.ಎಸ್.ಐ ಗಿರೀಶ ಎಂ. .ಎ.ಒ ನಿರಂಜನಸ್ವಾಮಿ, ಎ.ಎಸ್.ಐ ಸಿಬ್ಬಂದಿಗಳಾದ ಜಗದೀಶ ಕಾದ್ರೋಳ್ಳಿ, ಗುರುರಾಜ ತಮದಡ್ಡಿ, ಈಶ್ವರ ಜಿನ್ನವ್ವಗೋಳ, ಮಂಜುನಾಥ ಮುಸಳಿ. ಬೆಳಗಾವಿ ಜಿಲ್ಲಾ ಪೊಲೀಸ್ ಕಾರ್ಯಾಲಯದ ಟೆಕ್ನಿಕಲ್ ವಿಭಾಗದ ವಿನೋದ ಠಕ್ಕನ್ನವರ, ಸಚಿನ ಪಾಟೀಲ ರವರೊಂದಿಗೆ ಕೈಕೊಂಡಿರುತ್ತಾರೆ. ಈ ಕಾರ್ಯಕ್ಕೆ ಮಾನ್ಯ ಎಸ್.ಪಿ ಬೆಳಗಾವಿ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

TV24 News Desk
the authorTV24 News Desk

Leave a Reply