ಬೆಳಗಾವಿಬೆಳಗಾವಿ ನಗರ

ಮುರಗೇಂದ್ರಗೌಡ ಪಾಟೀಲ ಪೌಂಡೇಶನ ವತಿಯಿಂದ ಸ್ವಚ್ಚತಾ ಕಾರ್ಯ

ಬೆಳಗಾವಿ: ಸದಾ ಸಾಮಾಜಿಕ ಸೇವೆ ಮೂಲಕ ಗುರುತಿಸಿಕೊಂಡಿರುವ ಬೆಳಗಾವಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ ಅವರು, ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈ ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
 
ಹೌದು..‌ಮುರಗೇಂದ್ರಗೌಡ ಪಾಟೀಲ ಅವರು ತಮ್ಮ ಪೌಂಡೇಶನ ವತಿಯಿಂದ ಈಗಾಗಲೇ ಹಲವಾರು ಸರ್ಕಾರಿ ಶಾಲೆಗಳು, ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೆ ಸುಣ್ಣ ಬಣ್ಣ ಬಳೆಯುವ ಕಾರ್ಯ ಮಾಡುತ್ತ ಬಂದಿದ್ದಾರೆ.‌ ಅದೆ ರೀತಿ ಇಂದು ಕೂಡಾ ಗಣರಾಜ್ಯೋತ್ಸವದ ಅಂಗವಾಗಿ ಕಾಳಿ ಅಂಬ್ರಾಯಿ ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವ ಮೂಲಕ ಗಣರಾಜ್ಯೋತ್ಸವದ ಸಿದ್ಧತೆಯನ್ನು ಮಾಡಿದ್ದಾರೆ.‌ ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಸಂಸ್ಥೆಯ ಸದಸ್ಯರು, ಸ್ಥಳೀಯರು ಹಾಗೂ ಎಂ ಪಿ ಫೌಂಡೇಶನ್  ಕಾರ್ಯಕರ್ತರು ಉಪಸ್ಥಿತರಿದ್ದರು
TV24 News Desk
the authorTV24 News Desk

Leave a Reply