ರಾಮದುರ್ಗ: ಪಟ್ಟಣದ ಹೊರವಲಯದ ಹಲಗತ್ತಿ ಬಾಯಪಾಸ್ ರಸ್ತೆ ಬದಿಯಲ್ಲಿದ್ದ ತೋಟದಲ್ಲಿ ಆಯೋಜಿಸಲಾದ ರಾಮದುರ್ಗ ಜಮೇತೆ ಉಲ್ಮಾ ಸಂಘಟನೆ ಮುಸ್ಲಿಂ ಸಮುದಾಯದವರು ಮಾಲಾರಪನೆ ಮಾಡಿ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದಾರೆ.
ಈ ವೇಳೆ ಜಮಿಯಾತ ಏ ಉಲ್ಮಾ ರಾಮದುರ್ಗ ಕಾರ್ಯದರ್ಶಿ ಮುಫ್ತಿ ಹುಸೇನ್ ಪಟೇಲ ಅವರು ಮಾತನಾಡಿ ಇಡೀ ಜಗತ್ತಿನ ಸೃಷ್ಟಿಕರ್ತ ಒಬ್ಬನೇ, ನಮ್ಮ ನಿಮ್ಮಲಾರ ಜಗದ ಒಡೆಯಾ ಒಂದೆ, ಆದರೆ ನಾಮ ಹಲವು ನಮ್ಮಲ್ಲಿ ಉಡುಪು ಆಹಾರ ಸೇವನೆ ಬೇರೆ ಇರಬಹುದು ಈ ಜಗತ್ತಿನಲ್ಲಿ ಎರಡು ಜಾತಿಗಳು ಇದ್ದಾವೆ ಅದು ಒಂದು ಹೆಣ್ಣು ಒಂದು ಗಂಡು ಹುಟ್ಟಿಸಿದ್ದಾನೆ, ಇದರಲ್ಲಿ ಪಂಗಡಗಳ್ ಬೇರೆ ಬೇರೆ ಇದ್ದಾವೆ ಸೃಷ್ಟಿಕರ್ತನಲ್ಲಿ ಆತ್ಮಿಯವಾಗಿ ಯಾರು ಇರುತ್ತಾನೆ ಅಂದರೆ ಅವನ ತೋರಿದ ಮಾರ್ಗದಲ್ಲಿ ಸೃಷ್ಟಿಕರ್ತನ ಆರಾಧನೆ ಮಾಡುವನೇ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾದ ರಾಘವೇಂದ್ರಸ್ವಾಮಿ ದೊಡಮನಿ ಅವರು, ಇಸ್ಲಾಂ ಧರ್ಮದಲ್ಲಿ ನೀವು ಒಂದು ದಿನದಲ್ಲಿ 5 ಹೊತ್ತು ನಮಾಜ್ ಮಾಡುತ್ತಿರುವದು ನಾವು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದೇವೆ. ರಾಮದುರ್ಗದಲ್ಲಿ ನಮ್ಮ ನಿಮ್ಮ ಬಾಂಧವ್ಯ ಬಹಳ ದಿನದಿಂದ ಉತ್ತಮವಾಗಿದೆ. ಇಂದು ಮಾಡಿದಂತೆ ಕಾರ್ಯಕ್ರಮ ಪ್ರತಿಯೊಂದು ವರ್ಷ ಮಾಡಿ, ಇದೆ ಬಾಧವ್ಯ, ಪ್ರೀತಿ, ವಿಶ್ವಾಸಿ ಹೇಗೆ ಇರಲಿ ಎಂದು ಆ ಭಗವಂತ ಹತ್ತಿರ ಕೇಳುಕೊಳ್ಳೋವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗುರುಸ್ವಾಮಿಗಳಾದಂತಹ ರವಿ ಸ್ವಾಮಿ, ರಾಘವೇಂದ್ರ ಸ್ವಾಮಿ, ಅರುಣ ಸ್ವಾಮಿ ಸೇರಿದಂತೆ ನೂರಾರು ಮಾಲಾಧಾರಿಗಳು ಜಮಿಯಾತ ಏ ಉಲ್ಮಾ ರಾಮದುರ್ಗ ಅಧ್ಯಕ್ಷರು ಮೌಲಾನಾ ಇಮಾಮ ಹುಸೇನ ಮುಲ್ಲಾ, ಮುಫ್ತಿ ಹುಸೇನ ಪಟೇಲ , ಮೌಲನಾ ನೂರಅಹಮದ ಮಕಾನದಾರ, ಮೌಲನಾ ಅಬ್ದುಲ್ ರಹಮಾನ ಪೈಲವಾನ, ಹಫೀಜ್ ಇಸ್ಮಾಯಿಲ ಮಕಾನದಾರ,Md ಸೊಹೇಲ್ ಭೈರಕದಾರ,
ಹಾಜಿ ಮಿಯಾಸಾಬ ಜೈನೆಖಾನ, ಹಾಜಿ ಜಹಿರ ಪೆಂಡಾರಿ, ಮೌಲಾಸಾಬ ಯಾದವಾಡ ಆಲ್ಲಿಸಾಬ ಖಲಿಫ, ಶಬ್ಬೀರ್ ಭೈರಕದಾರ, ದವಲಸಾಬ ಅಣ್ಣಿಗೇರಿ ಉಪಸ್ಥಿತರಿದ್ದರು.