ಬೆಳಗಾವಿ:ನೀವು ತಾಯಿ ಆಣೆ ಮಾಡಿ ಹೇಳಿರಿ,ತಾಯಿ ಮೇಲೆ ಗೌರವ ಇದ್ರೆ 24 ತಾಸಿನಲ್ಲಿ ಹೇಳ್ತಾರೆ. ಧಮ್ಕಿ ಮಾಡಿ ನಾವು ಮೀಸಲಾತಿ ಕೇಳ್ತಿಲ್ಲ, ಧಮ್ಕಿ ಮಾಡಿದ್ರೆ ಸುವರ್ಣಸೌಧ ಮುತ್ತಿಗೆ ಹಾಕ್ತಿದ್ದೀವಿ, ನಿಮ್ಮನ್ನು ಮೂತ್ರವಿಸರ್ಜನೆಗೂ ಬಿಡುತ್ತಿರಲಿಲ್ಲ ಏನೂ ಮಾಡದೇ ಧಮ್ಕಿ ಅಂತಾ ಅಪವಾದ ಕೊಡ್ತೀರಾ? ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ ಮಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ನೀಡುವ ಸಿಎಂ ಭರವಸೆ ಕೊಟ್ರು, ಕ್ಯಾಬಿನೆಟ್ ಸಭೆಯಲ್ಲಿ ವಿಷಯ ಹಾಕದೇ ಚರ್ಚೆ ಮಾಡಿದ್ರೋ ಇಲ್ವೋ ಗೊತ್ತಿಲ್ಲ, ಕರ್ನಾಟಕ ರಾಜಕೀಯ ಭವಿಷ್ಯದಲ್ಲಿ ಭಾರೀ ತೀರ್ಮಾನ ಕೈಗೊಳ್ಳಲು ಸಭೆ, ಬೊಮ್ಮಾಯಿ ಸಿಎಂ ಆಗಿದಾಗಿನಿಂದ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸ, ವರದಿ ಕೊಡುವ ಪುಣ್ಯಾತ್ಮ ಮಳೆ ಐತಿ ಕೊರೊನಾ ಐತಿ ಅಂತಾ ನೆಪ ಹೇಳಿದ್ರು ಎಂದರು.
ನಾನು ಬೊಮ್ಮಾಯಿಗೆ ಹೇಳಿಬಿಟ್ಟಿದೀನಿ, ಸೂರ್ಯಚಂದ್ರ ಇರೋವರೆಗೂ ಪಕ್ಷದಿಂದ ಉಚ್ಚಾಟನೆ ಮಾಡ್ತೀವಿ ಅನ್ನಬಹದು, ನೀವು ಕಟೀಲ್ ಅಷ್ಟೇ ಹೇಳಬಹುದು, ಬೊಮ್ಮಾಯಿ ತಾಯಿ ಆಣೆ ಮಾಡಿ ಈ ರೀತಿ ಮಾಡೋದು, ಬೊಮ್ಮಾಯಿಯವರು ಹುಚ್ಚರಲ್ಲಿ ತಗೆದುಬಿಟ್ರು, ಯಡಿಯೂರಪ್ಪ ಮಾತು ಕೇಳಿ ಎಷ್ಟು ದಿವಸ ನಮಗೆ ಟೋಪಿ ಹಾಕೋರು? ಎಂದರು