ಹುಕ್ಕೇರಿ: ಹುಕ್ಕೇರಿ ತಾಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೆತನ ಮತ್ತು ಹಿರಿಯ ನಾಗರಿಕ ಸಬಲಿಕರಣ ಇಲಾಖೆ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ದಿವಂಗತ ಉಮೇಶ ಕತ್ತಿ ಯವರ ಅನುದಾನದಲ್ಲಿ ಅಂಗವಿಕಲರಿಗೆ ಕೋಡಮಾಡಿದ ತ್ರಿಚಕ್ರ ವಾಹನಗಳನ್ನು ಪಡೆದ ಫಲಾನುಭವಿಗಳು ಈ ವಾಹನಗಳ ಸಹಾಯದಿಂದ ಹಲವಾರು ದಿನಿತ್ಯದ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ತಾವು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗಾಧಿಕಾರಿ ಬಲರಾಮ ಚವ್ಹಾಣ, ತಹಸಿಲ್ದಾರ ಡಾ, ಡಿ ಎಚ್ ಹೂಗಾರ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಎಚ್ ಹೋಳೆಪ್ಪಾ, ತಾಲೂಕು ಅಂಗವಿಕಲರ ಸಂಯೋಜಕ ಚಂದ್ರಕಾಂತ ತಳವಾರ, ಬಿ ಜೆ ಪಿ ಮುಖಂಡರಾದ ಗುರು ಕುಲಕರ್ಣಿ, ಪರಗೌಡಾ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ರಾಜು ಮುನ್ನೋಳ್ಳಿ, ಮಿರ್ಜಾ ಮೋಮಿನ ಮೊದಲಾದವರು ಉಪಸ್ಥಿತರಿದ್ದರು.