ರಾಮದುರ್ಗ:- ಪಟ್ಟಣದ ಬಾಲಕಿಯರ ನೂತನ ಪ್ರೌಢಶಾಲೆಯಲ್ಲಿ ಇಂದು ತಾಲೂಕು ಕಾನೂನು ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು, ಈ ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶರಾದ ಹನುಮಂತ್ ಜಿ ಎಚ್ ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಕೀತಾ ಹದ್ಲಿ ದಿವಾಣಿ ನ್ಯಾಯಾಧೀಶರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಆರ್ ಜಿ ವಜ್ರಮಟ್ಟಿ , ಎಂ ಎಂ ಚಳಕೊಪ್ಪ ಸಹಾಯಕ ಸರ್ಕಾರಿ ಅಭಿ ಯೋಜಕರು, ಎಸ್ ಎಂ ಕಾರಜೋಳ್ ಆರಕ್ಷಕ ಉಪ ನಿರೀಕ್ಷಕರು, ಆರ್ ಜೋಶಿ ಶಿಕ್ಷಣ ಸಂಯೋಜಕರು , ಎಸ್ ಡಿ ಚೌಹಾನ್ ಮುಖ್ಯೋಪಾಧ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
tv24plus.in > Blog > ಜಿಲ್ಲೆ > ಬೆಳಗಾವಿ > ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ