ಬೆಳಗಾವಿ

ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ

ರಾಮದುರ್ಗ:- ಪಟ್ಟಣದ  ಬಾಲಕಿಯರ ನೂತನ ಪ್ರೌಢಶಾಲೆಯಲ್ಲಿ ಇಂದು ತಾಲೂಕು ಕಾನೂನು ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು, ಈ ಕಾರ್ಯಕ್ರಮವನ್ನು  ಹಿರಿಯ ದಿವಾಣಿ ನ್ಯಾಯಾಧೀಶರಾದ  ಹನುಮಂತ್ ಜಿ ಎಚ್  ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಕಾನೂನಿನ  ಅರಿವು ಮೂಡಿಸಿದರು.  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಶ್ರೀಮತಿ ಸುಕೀತಾ ಹದ್ಲಿ ದಿವಾಣಿ ನ್ಯಾಯಾಧೀಶರು  ಆಗಮಿಸಿದ್ದರು.  ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ  ಆರ್ ಜಿ ವಜ್ರಮಟ್ಟಿ , ಎಂ ಎಂ ಚಳಕೊಪ್ಪ ಸಹಾಯಕ ಸರ್ಕಾರಿ ಅಭಿ ಯೋಜಕರು,  ಎಸ್ ಎಂ ಕಾರಜೋಳ್ ಆರಕ್ಷಕ ಉಪ ನಿರೀಕ್ಷಕರು,  ಆರ್ ಜೋಶಿ  ಶಿಕ್ಷಣ ಸಂಯೋಜಕರು ,  ಎಸ್ ಡಿ ಚೌಹಾನ್  ಮುಖ್ಯೋಪಾಧ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
TV24 News Desk
the authorTV24 News Desk

Leave a Reply