ಬೆಳಗಾವಿಬೆಳಗಾವಿ ನಗರ

ಕಾರ್ಮಿಕರು ದೇಶದ ಶಕ್ತಿ: ಆಸೀಫ್ (ರಾಜು) ಸೇಠ್

ಬೆಳಗಾವಿ : ಇಂದು ೧೪೨ ನೇ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ,  ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ಅದೇ ರೀತಿ ಇಂದು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಸೀಫ್ ( ರಾಜು)  ಸೇಠ್   ಕಾರ್ಮಿಕರ ದಿನಾಚರಣೆ ನಿಮಿತ್ಯ ನಗರದ ಆದಿತ್ಯ ಮಿಲ್ಕ್ ಕಂಪನಿಯ ಕಾರ್ಮಿಕರನ್ನು ಅವರಲ್ಲಿ ಭೇಟಿ ಮಾಡಿ ಕಾರ್ಮಿಕರು ದೇಶದ ಶಕ್ತಿ ಎಂದು ಅವರಿಗೆ ಪ್ರೋತ್ಸಾಹ ನೀಡಿದರು. ನಗರದ ಶಿವಬಸವ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಿದ ಅವರು ಇನ್ನು ಸಿಬ್ಬಂದಿಗಳ ಕುಶಲೋಪರಿ ವಿಚಾರಿಸಿ ಈ ಬಾರಿ ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಿದರು.ಅಲ್ಲದೆ ಕಾಂಗ್ರೆಸ್ ಗೆಲ್ಲಿಸುವದರಿಂದ ಉತ್ತರ ಕ್ಷೇತ್ರದ ವ್ಯಾಪ್ತಿಯ ರಸ್ತೆ,ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಹೋಗಲಾಡಿಸುವುದು ಎಂದು ಹೇಳಿದರು.ಇನ್ನು ಕಾರ್ಯಕ್ರಮದಲ್ಲಿ,ರವಿ ಮುತ್ತಣ್ಣವರ,ರವಿ ಪಾಟೀಲ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
TV24 News Desk
the authorTV24 News Desk

Leave a Reply