ಬೆಳಗಾವಿಬೆಳಗಾವಿ ನಗರ

ಕಳಸಾ ಬಂಡೂರಿಗೆ ಯೋಜನೆಗೆ ಗ್ರೀನ್ ಸಿಗ್ನಲ್  ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ 

ಬೆಳಗಾವಿ ಕರ್ನಾಟಕದ ಬಹು ದೀರ್ಘಕಾಲದ ಕನಸಾಗಿದ್ದ ಕಳಸಾ ಬಂಡೂರಿ ನೀರಾವರಿ ಯೋಜನೆಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇಂದು ಹಸಿರು ನಿಶಾನೆ ನೀಡಿದ್ದಾರೆ. ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ದಶಕಗಳ ಕಾಲ ಯೋಜನೆಯ ಜಾರಿಗಾಗಿ ಹೋರಾಟ ನಡೆಸಿದ ರೈತ ಬಾಂಧವರ ಕನಸು ನನಸಾಗುವಂತೆ ಮಾಡಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಕಳಸಾ ಬಂಡೂರಿ ಯೋಜನೆಯ 1.7 ಟಿಎಂಸಿ ಕಳಸಾ ಡ್ಯಾಮ್ ನಿಂದ ನೀರು ಪಡೆಯುವ ಯೋಜನೆ ಹಾಗೂ 2.18 ಟಿ ಎಮ್ ಸಿ ಬಂಡೂರಿ ಡ್ಯಾಮ್ ನಿಂದ ನೀರು ಪಡೆಯುವ ಯೋಜನೆಯ ಡಿಪಿಆರ್ ಕೇಂದ್ರಕ್ಕೆ ಸಲ್ಲಿಕೆ ಮಾಡಿದ್ದೇವು. ಮೋದಿ ನೇತೃತ್ವದ ಸರಕಾರ ಡಿಪಿಆರ್ ಒಪ್ಪಿಕೊಂಡಿದೆ. ಇದರಿಂದ ಬಹಳ ದಿನಗಳ ಕನಸು ನನಸಾಗಿದೆ, ಉತ್ತರಕರ್ನಾಟಕದ ಪರವಾಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದಕ್ಕೆ ಸಹಕಾರ ಕೊಟ್ಟ ಕೇಂದ್ರ ನೀರಾವರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೂಡಲೆ ಟೆಂಡರ್ ಪ್ರಕ್ರಿಯೆ ಆರಂಭಿಸಿ ಯೋಜನೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಸರಕಾರ ಬದ್ಧವಾಗಿದೆ. ಬೆಳಗಾವಿ ಅಧಿವೇಶನದ ವೇಳೆಗೆ ಸಿಹಿ ಸುದ್ದಿ ಬಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ನಮ್ಮ ಸರ್ಕಾರ ಮಹದಾಯಿ ಯೋಜನೆ ಮಾಡಲು 2002ರಿಂದ ಕಳಸಾದಿಂದ ಡೈವರ್ಟ್ ಮಾಡಲು ಚರ್ಚಿಸಿದಾಗ ಗೋವಾರಾಜ್ಯ ತಗಾದೆ ತೆಗೆಯಿತು. ಬಹಳಷ್ಟು ಒತ್ತಾಯ ಮಾಡಿ, ಟ್ರಿಬ್ಯೂನಲ್ ಅಧ್ಯಕ್ಷರು ಬಂದಾಗ ಹೋರಾಟ ಮಾಡಿದೆವು. ಪೂರ್ಣ ಪ್ರಮಾಣದ ನೀರು ಸಿಗದಿದ್ರೂ, ಡೈವರ್ಷನ್ ಮಾಡಲು ಅನುಮತಿ ಸಿಕ್ಕಿತು.  2018ರಲ್ಲಿ ನೋಟಿಫಿಕೇಷನ್ ಆಗಿದೆ. ಈಗ ನಮಗೆ ಕಳಸಾದಲ್ಲಿ 1.72 TMC ನೀರು ಕಳಸದಿಂದ ಡೈವರ್ಟ್ ಮಾಡಲು ಹಾಗೂ 2.18 ಬಂದೇರಿಯಾ ಡ್ಯಾಮ್‌ನಿಂದ ಡೈವರ್ಟ್ ಮಾಡಲು ಒಪ್ಪಂದ ಆಗಿದೆ.

ಇಡೀ ಕರ್ನಾಟಕ ಜನತೆ ಹಾಗೂ ಎಲ್ಲಾ ಸದಸ್ಯರ ಪರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸ್ತೇನೆ. ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ ಮತ್ತು ಈ ಕಾರ್ಯಕ್ಕೆ ನಿರಂತರವಾಗಿ ಓಡಾಡಿದ ನೀರಾವರಿ ಸಚಿವ ಗೋವಿಂದ್ ಕಾರಜೋಳ ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ, ಕೂಡಲೇ ಡಿಪಿಆರ್ ಸಿದ್ದಪಡಿಸಿ ಕಾರ್ಯಯೋಜನೆ ಆರಂಭಿಸುತ್ತೆವೆ. ಸದ್ಯದಲ್ಲೆ ನಾವೇ ಅಡಿಗಲ್ಲು ಹಾಕಿ ಪೂಜೆ ನೆರವೇರಿಸುತ್ತೆವೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವಾಗಲೇ ಈ ಸುದ್ದಿ ಬಂದಿರೋದು ಮತ್ತೊಂದು ದೊಡ್ಡ ಖುಷಿ ತಂದಿದೆ. ಎಂದು ಸದನದಲ್ಲಿ ಪ್ರಸ್ತಾಪ ಮಾಡಿದಾಗ ಎಲ್ಲಾ ಸದಸ್ಯರು ಮೇಜು ಕುಟ್ಟಿ ಅಭಿನಂದನೆ ಸಲ್ಲಿಸಿದರು.

TV24 News Desk
the authorTV24 News Desk

Leave a Reply