ಬೆಳಗಾವಿ: ಇಂದು ಜಿಲ್ಲಾ ಕನ್ನಡ ಸಾಹಿತ್ಯ ಷರಿಷತ್ತ್ ವತಿಯಿಂದ ಚಿಕ್ಕೋಡಿಯಲ್ಲಿ ನಡೆಯುವ 15 ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆಯಾದ ಮಂಗಲಾ ಮೆಟಗುಡ್ಡ ಅವರು ಬೆಳಗಾವಿಯಲ್ಲಿ ಮರಾಠ ಸಾಹಿತ್ಯ ಸಮ್ಮೇಳನ ಮಾಡಲು ಅವಕಾಶ ಇದೆ, ಆದರೇ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎನ್ನಲ್ಲು ಯಾರಿಗೂ ಹಕ್ಕಿಲ್ಲ ಇದು ಕನ್ನಡಿದರ ಸೋತ್ತಾಗಿದೆ ಎಂದರು.
ಡಿಸೆಂಬರ್ 21 ಮತ್ತು 22 ರಂದು ಚಿಕ್ಕೋಡಿ ಯಲ್ಲಿ 15 ನೇ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ನಾವು ಸಹ ಮರಾಠ ಸಮ್ಮೇಳನದಲ್ಲಿ ಬಿಡುಗಡೆ ಮಾಡುವ ಠರಾವುಗಳನ್ನು ನಾವು ಕನ್ನಡ ಪರ ಠರಾವು ಬಿಡುಗಡೆ ಮಾಡುತ್ತೇವೆ, ಸೊಲ್ಲಾಪುರ ವರೆಗಿನ ಪ್ರದೇಶ ಕರ್ನಾಟಕಕ್ಕೆ ಸೇರಿಸಬೇಕು ಎನ್ನುವ ಅಂಶವನ್ನು ವ್ಯಕ್ತಪಡಿಸಿದರು.