ಬೆಳಗಾವಿ: ನಗರದ ಮನೆಗಳ ಮೇಲಿದ್ದ ಕನ್ನಡ ಬಾವುಟಗಳನ್ನು ಪೊಲೀಸರು ತೆರವು ಮಾಡುತ್ತಿರುವ ಆರೋಪ ಹಿನ್ನೆಲೆ ಬೆಳಗಾವಿ ಕನ್ನಡಿಗರ ಪಾಲಿಗೆ ಬಿಜೆಪಿಯವರು ಎಂಇಎಸ್ ಅವರಿಗಿಂತ ಡೇಂಜರ್ ಎಂದು ಕೆಪಿಸಿಸಿ ಸದಸ್ಯೆ ಸರಳಾ ಸಾತ್ಪುತೆ ಆರೋಪಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಫೋಟೋ ಪೋಸ್ಟ್ ಮಾಡಿದ ಸರಳಾ ಸಾತ್ಪುತೆ, ಪೊಲೀಸರು ಕನ್ನಡ ಬಾವುಟ ತೆರವು ಮಾಡುವ ಫೋಟೋ ಹಾಕಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಕನ್ನಡಿಗರ ಪಾಲಿಗೆ ಬಿಜೆಪಿಯವರು ಎಂಇಎಸ್ ಅವರಿಗಿಂತ ಡೇಂಜರ್ ಆಗಿದ್ದಾರೆ. ಬೆಳಗಾವಿಯಲ್ಲಿ ನಗರದ ಎರಡೂ ವಿಧಾನಸಭಾ ಕ್ಷೇತ್ರಗಳು, ಬೆಳಗಾವಿ ಲೋಕಸಭಾ ಕ್ಷೇತ್ರ ಜೊತೆಗೆ ರಾಜ್ಯ ಸರ್ಕಾರ ಬಿಜೆಪಿ ಕೈಯಲ್ಲಿದೆ.ಆದರೆ,ಬೆಳಗಾವಿ ಜಿಲ್ಲಾ ಕೇಂದ್ರದಲ್ಲಿ ನಾಡ ಧ್ವಜ ಹಾರಾಡಲು ಪೊಲೀಸರು ಅವಕಾಶ ಕಲ್ಪಿಸುತ್ತಿಲ್ಲ.ರಾಜ್ಯೋತ್ಸವದಲ್ಲಿ ಕುಣಿದಾಡಿ ಅಭಿಮಾನ ಮೆರೆಯುವ ಪೊಲೀಸರು ಇಂದು ಮನೆ ಮನೆಗೆ ತೆರಳಿ ನಾಡ ಬಾವುಟ ತೆರವುಗೊಳಿಸುತ್ತಾರೆ ಎಂದು ಹೇಳಿದ್ದಾರೆ.
ಪೊಲೀಸರ ಮೇಲೆ ಆಡಳಿತ ಪಕ್ಷದ ರಾಜಕಾರಣಿಗಳ ಒತ್ತಡ ಎಷ್ಟಿರಬಹುದು ಅನ್ನೋದನ್ನ ಊಹೆ ಮಾಡಬೇಕು. ಇಲ್ಲಿನ ನಮಖರಾಮ್ ಬಿಜೆಪಿ ನಾಯಕರ ಕನ್ನಡ ವಿರೋಧಿ ಕೆಲಸವನ್ನು ವಿರೋಧಿಸುತ್ತಿರುವ ಕಟ್ಟಾ ಕನ್ನಡ ಹೋರಾಟಗಾರರು ಇಂದು ಹೇಳುತ್ತಿದ್ದಾರೆ ಎಂದು ಫೇಸ್ಬುಕ್ನಲ್ಲಿ ಕೆಪಿಸಿಸಿ ಸದಸ್ಯೆ ಸರಳಾ ಸಾತ್ಪುತೆ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.