ಬೆಳಗಾವಿ:ಮಹಾರಾಷ್ಟ್ರ ನಾಯಕರು ಇಲ್ಲಿ ಏಕೆ ಬರುತ್ತಾರೆ? ಏನು ಕೆಲಸ ಇದೆ?. ಬೆಳಗಾವಿ ಏನು ಮಹಾರಾಷ್ಟ್ರ ಮಂತ್ರಿಗಳ ಮಾವನ ಮನೆಯೇ? ಎಂದು ಮಹಾರಾಷ್ಟ್ರದ ಸಚಿವರಿಗೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಗೆ ಬಂದೇ ಬರ್ತಿನಿ ಎಂಬ ಮಹಾರಾಷ್ಟ್ರದ ಸಚಿವ ಚಂದ್ರಕಾಂತ ಪಾಟೀಲ್ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸುಮ್ಮನೆ ಅವರು ಬರ್ತಿನಿ, ಬರ್ತಿನಿ ಅಂತಾರೆ.ಆದ್ರೆ ಅವರು ಬರಲ್ಲ.ಮಹಾರಾಷ್ಟ್ರದ ಸಚಿವರನ್ನು ಬರಲಿಕ್ಕೆ ನಾವು ಬಿಡುವುದಿಲ್ಲ.ಮಹಾರಾಷ್ಟ್ರ ಹಾಗೂ ಎಂಇಎಸ್ ನಾಯಕರಿಗೆ ಬೇರೆ ಯಾವುದೇ ವಿಷಯಗಳು ಇಲ್ಲ.ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ.ಜೀವಂತ ಇಲ್ಲ. ಅದಕ್ಕೆ ಜೀವ ತುಂಬಬೇಕೆಂದು ರಾಜಕೀಯ ಲಾಭ ಪಡೆಯಲು ಕೆಲ ಸ್ಥಳೀಯರು ಮಾಡುತ್ತಿದ್ದಾರೆ ಎಂದರು.
ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗ, ಇದನ್ನು ಅವರೆಂಗೆ ಕೇಳ್ತಾರೆ? ಆಗಲ್ಲ.ಅನವಶ್ಯಕವಾಗಿ ಗೊಂದಲ ಸೃಷ್ಟಿಸಿ ಸಾಮರಸ್ಯ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಸೇರಿ ನಾವೆಲ್ಲರೂ ನೆಮ್ಮದಿಯಿಂದ ಇದ್ದೇವೆ.ಇಲ್ಲಿ ಮರಾಠಾ ಸಮಾಜ ಮತ್ತು ನಾವು ಸೌಹಾರ್ದಯುತವಾಗಿ ಇದ್ದೇವೆ.ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಂಇಎಸ್ ಹುಟ್ಟುಹಾಕಿದ್ದಾರೆ. ಅವರಿಗೆ ಶಾಸಕರಾಗೇಕು.ಎಲ್ಲ ಸವಲತ್ತುಗಳನ್ನು ತಮಗೆ ವೈಯಕ್ತಿಕವಾಗಿ ತಗೆದುಕೊಳ್ಳಬೇಕು ಅನ್ನೋದಿದೆ.ಶಾಸಕರಾಗಬೇಕಾದ್ರೆ ಬೇಕಾದ್ರೆ ಮಹಾರಾಷ್ಟ್ರಕ್ಕೆ ಹೋಗಿ ಶಾಸಕರಾಗಲಿ.ಕರ್ನಾಟಕದ ಅನ್ನ ತಿನ್ನೋದು, ನೀರು ಕುಡಿಯೋದು, ಲಾಭತೆಗೆದುಕೊಳ್ಳೋದು.ಆ ಮೇಲೆ ಮಹಾರಾಷ್ಟ್ರಕ್ಕೆ ಬಿಡ್ರಿ ಅಂದ್ರೆ ಹೇಗೆ?ಎಂದು ಹರಿಹಾಯ್ದರು.
ಜತ್ತ ತಾಲ್ಲೂಕಿನ 44 ಗ್ರಾಮಗಳ ಜನರು ಕರ್ನಾಟಕ ಸೇರಲು ಮುಂದಾಗಿದ್ದಾರೆ.ನಮ್ಮನ್ನ ಕರ್ನಾಟಕಕ್ಕೆ ಸೇರಿಸಿ ಎಂದು 4 ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರಕ್ಕೂ ಮನವಿ ಮಾಡಿದ್ದಾರೆ. ಕರ್ನಾಟಕಕ್ಕೆ ಕರೆದುಕೊಳ್ಳುವಂತೆ ನಮಗೂ ಮನವಿ ಮಾಡಿದ್ದಾರೆ. ಅಲ್ಲಿನ ಕನ್ನಡ ಭಾಷಿಕರಿಗೆ ಸರ್ಕಾರದ ಸೌಲಭ್ಯ ಸಿಗದ ಸಂದರ್ಭದಲ್ಲಿ ಈ ಬೇಡಿಕೆ ಇಟ್ಟಿದ್ದಾರೆ. ಮೊದಲು ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ಎಲ್ಲ ಜನರಿಗೆ ಅವರು ಸವಲತ್ತುಗಳನ್ನು ಕೊಡಲಿ.ಆ ಬಳಿಕವೇ ಅವರು ಕರ್ನಾಟಕಕ್ಕೆ ಬರುವ ಪ್ರಯತ್ನ ಮಾಡಲಿ ಎಂದರು.
ಮಹಾರಾಷ್ಟ್ರ ನಾಯಕರು ಇಲ್ಲಿ ಏಕೆ ಬರುತ್ತಾರೆ? ಏನು ಕೆಲಸ ಇದೆ?.ಬೆಳಗಾವಿ ಏನು ಮಹಾರಾಷ್ಟ್ರ ಮಂತ್ರಿಗಳ ಮಾವನ ಮನೆಯೇ?. ಮಹಾರಾಷ್ಟ್ರ ಮಂತ್ರಿಗಳು ಬೆಳಗಾವಿಗೆ ಬರಲು ಮಾವನ ಮನೆಯೇ..ನೀವು ಸ್ನೇಹಪರವಾಗಿ ಭೇಟಿ ನೀಡಿ. ರಾಜಕೀಯ ವಿಷಯ ಇಟ್ಟುಕೊಂಡು ಬಂದ್ರೆ ಗಡಿ ಈಚೆಗೆ ನಿಮನ್ನು ಬಿಡಲ್ಲ.ಅವರು ಇಲ್ಲಿ ಹೆಂಗೆ ಬರಲು ಆಗುತ್ತದೆ.ನೀವು ನಮ್ಮ ಸಂಬಂಧಗಳ ಆಧಾರದ ಮೇಲೆ ಬರಬೇಕು. ಸ್ನೇಹಪೂರ್ವಕವಾಗಿ ಬೆಳಗಾವಿಗೆ ಭೇಟಿ ನೀಡಬೇಕು.ಆದ್ರೆ ರಾಜಕೀಯ ಉದ್ದೇಶ ಇಟ್ಟುಕೊಂಡು ಬಂದ್ರೆ ನಾವು ಬಿಡಲ್ಲ ಎಂದರು.
ಅಥಣಿ ಜಿಲ್ಲೆ ಮಾಡಿ ನಮ್ಮನ್ನು ಸೇರಿಸಿಕೊಳ್ಳಿ ಎಂದು ಜತ್ ಕನ್ನಡ ಭಾಷಿಕರ ಅಭಿಯಾನ ವಿಚಾರಕ್ಕೆ, ಇದನ್ನು ಮಹಾರಾಷ್ಟ್ರ ನಾಯಕರು ಅವಲೋಕನ ಮಾಡಿಕೊಳ್ಳಬೇಕು. ಬೆಳಗಾವಿ ಬರುವ ಮುಂಚೆ ನಮ್ಮ ಜನ ನಮ್ಮ ಕೈಮೀರಿ ಹೋಗ್ತಿದ್ದಾರೆಂದು ಆಲೋಚನೆ ಮಾಡಬೇಕು. ಮೊದಲು ತಮ್ಮ ರಾಜ್ಯದ ಜನರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಆ ಮೇಲೆ ಬೆಳಗಾವಿ ಬರುವ ಬಗ್ಗೆ ಆಲೋಚನೆ ಮಾಡಲಿ ಎಂದರು.
ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ ಯುವಕನ ಮೇಲೆ ಹಲ್ಲೆಗೆ ಲಕ್ಷ್ಮಣ್ ಸವದಿ ಖಂಡನೆ ವ್ಯಕ್ತಪಡಿಸಿದ್ದುಪೊಲೀಸ್ ಅಧಿಕಾರಿಗಳದ್ದು ತಪ್ಪಿದೆ, ಸಹಪಾಠಿಗಳು ಹಲ್ಲೆ ಮಾಡಿದ್ದು ತಪ್ಪಿದೆ. ಕರ್ನಾಟಕದವನಾಗಿ ಕನ್ನಡಿಗನಾಗಿ ಕನ್ನಡ ಬಾವುಟ ಹಾರಿಸುವುದರಲ್ಲಿ ತಪ್ಪಿಲ್ಲ.ಭಾರತದಲ್ಲಿ ಭಾರತ ಧ್ವಜ ಹಾರಿಸದೇ ಪಾಕಿಸ್ತಾನದ ಧ್ವಜ ಹಾರಿಸೋಕಾಗುತ್ತಾ?..ಈ ರೀತಿಯ ಹಲ್ಲೆಯನ್ನು ನಾವು ಖಂಡಿಸುತ್ತೇವೆ.ಪೊಲೀಸ್ ಅಧಿಕಾರಿಗಳು ಹಲ್ಲೆ ಮಾಡಿದ್ರೆ ಅದನ್ನೂ ನಾವು ಖಂಡಿಸುತ್ತೇವೆ ಎಂದು ಲಕ್ಷ್ಮಣ ಸವದಿ ಹೇಳಿದರು.