ವಿಜಯಪುರ

ಹನುಮ ಮಾಲಾ ಧರಿಸಿದ  ಭಾವೈಕ್ಯತೆ  ಸಾರಿದ ಮುಸ್ಲಿಂ ವ್ಯಕ್ತಿ

ವಿಜಯಪುರ: ಈಗಿನ ದಿನಮಾನಗಳಲ್ಲಿ ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ವಿಚಾರದಲ್ಲಿ ಕೋಮು ಸೌಹಾರ್ಧದಲ್ಲಿ ಬಿರುಕು ಮೂಡಿಸಿವೆ.  ಹಿಂದೂ ಮುಸ್ಲಿಂ ಸಮುದಾಯಗಳ ಮಧ್ಯೆ ಬಿರುಕು ಮೂಡಲು ಈ ಘಟನೆಗಳು ಸಾಕ್ಷಿಯಾಗಿವೆ. ಅದರಲ್ಲೂ  ಹನುಮ ಮಾಲಾ ಧರಿಸಿ ಮುಸ್ಲಿಂ ವ್ಯಕ್ತಿ ಕೋಮು ಸೌಹಾರ್ಧತೆ ಮೆರೆದಿದ್ದಾರೆ.
ಬಸವನಬಾಗೇವಾಡಿಯ  ಮುಸ್ಲಿಂ ಭಕ್ತನೊಬ್ಬ ಹನುಮ ಮಾಲಾ ಧರಿಸಿ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟಕ್ಕೆ ಹೊರಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾನೆ. ವಿಶ್ವಗುರು ಬಸವೇಶ್ವರ ಹುಟ್ಟಿದ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಜಾಫರ್ ಬೆಣ್ಣೆ ಎಂಬವರೇ ಭಾವೈಕ್ಯತೆ ಮೆರೆದ ಹನುಮಭಕ್ತ ರಾಗಿದ್ದಾರೆ. ಹಣೆಗೆ ಗಂಧ, ತಿಲಕ ಇರಿಸಿ, ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ಹನುಮ ಮಾಲಾ ಧರಿಸಿ, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಫರ್ ಜಾತಿಗಿಂತ ಭಾವೈಕ್ಯತೆ ದೊಡ್ಡದು ಎನ್ನುವದನ್ನು ತೋರಿಸಿ ಕೊಟ್ಟಿದ್ದಾರೆ. ಹನುಮ ಮಾಲೆ ಧರಿಸಿರುವ ಜಾಫರ್ ಉತ್ತರ ಕರ್ನಾಟಕದ ಪ್ರಸಿದ್ದ ಹಾಗೂ ಹನುಮ ಜನ್ಮಭೂಮಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದಾರೆ. ಬಸವನಾಡಿನಲ್ಲಿ ಐಕ್ಯತೆ ಸಾರಿರೋ ಜಾಫರ್ ಬೆಣ್ಣಿ ನಡೆಗೆ ಹಿಂದೂ ಮುಸ್ಲಿಂ ಸಮುದಾಯದವರಿಂದ ಮೆಚ್ಚುಗೆ ವ್ಯಕ್ತವಾಗಿದೆ.
TV24 News Desk
the authorTV24 News Desk

Leave a Reply