ಹುಕ್ಕೇರಿ : ಬೀದಿನಾಯಿಗಳು ಪುರಸಭೆ ಸದಸ್ಯೆ ಮೇಲೆ ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಜರುಗಿದೆ.
ನಿನ್ನೆ ಪುರಸಭೆ 16ನೇಯ ವಾರ್ಡ್ ಸದಸ್ಯೆ ಶ್ರೀ ಮತಿ ಡಲಾಯತ ಅವರನ್ನು ಹಲವು ಬೀದಿ ನಾಯಿಗಳು ಒಟ್ಟಿಗೇ ಸೇರಿ ಕಚ್ಚಲು ಬಂದಿವೆ ಅದ್ರಷ್ಟವಶ ಅವರು ನಾಯಿಗಳ ಬಾಯಿಂದ ಬಚಾವ್ ಆಗಿದ್ದಾರೆ . ಮುಖ್ಯಾಧಿಕಾರಿಗಳಿಗೆ ಹಲವಾರು ಬಾರಿ ಎಲ್ಲ ಸದಸ್ಯರು ಸೇರಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಹೇಳಿದರು ಏನು ಪ್ರಯೋಜನ ಆಗುತ್ತಿಲ್ಲಾ
ಇದೆ ರೀತಿ ನಗರದಲ್ಲಿ ಸುಮಾರು ನಾಯಿಗಳು ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಚಿಕ್ಕ ಮಕ್ಕಳು ಶಾಲೆಗಳಿಗೆ ಹೋಗುವದಕ್ಕುಭಯ ಪಡುವ ಸ್ಥಿತಿ ಬಂದಿದೆ.ನಗರಲ್ಲಿ ನಾಗರಿಕರ ವಯೋವೃದ್ಧರ ಹಾಗೂ ಮುಂಜಾನೆ ವಾಯು ವಿಹಾರಕ್ಕೆ ಹೋಗುವವರ ಪರಿಸ್ಥಿತಿ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ . ಒಟ್ಟಾರೆಯಾಗಿ ಹೇಳುವುದಾದರೆ ಸಂಭಂದಿಸಿದ ಅಧಿಕಾರಿಗಳಿಗೆ ಜನಸಾಮಾನ್ಯರು ಹಿಡಿ ಶಾಪ ಹಾಕುತ್ತಿದ್ದಾರೆ ಇನ್ನಾದರು ಸಂಬಂದ ಪಟ್ಟ ಅಧಿಕಾರಿಗಳು ಎಚ್ಛೆತ್ತು ಇತ್ತಕಡೆ ಗಮನ ಹರಿಸಬೇಕೆಂದು ಜನಸಾಮಾನ್ಯರ ಆಗ್ರಹವಾಗಿದೆ